ಸೌಹಾರ್ದ ಧಾರ್ಮಿಕ ಕೇಂದ್ರಕ್ಕೆ ವ್ಯವಸ್ಥಾಪನಾ ಸಮಿತಿ ರಚನೆ
ತೀರ್ಥಹಳ್ಳಿ ತಾಲ್ಲೂಕಿನ ಸೌಹಾರ್ದ
ಧಾರ್ಮಿಕ ಕೇಂದ್ರ ಹಣಗೆರೆಕಟ್ಟೆ ಭೂತರಾಯ ಚೌಡೇಶ್ವರಿ ಮತ್ತು ಹಜರತ್ ಸಾದತ್ ಅಲಿ ದರ್ಗಾಕ್ಕೆ 3
ವರ್ಷದ ಅವಧಿಗೆ ವ್ಯವಸ್ಥಾಪನಾ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬುಧವಾರ ಸಮಿತಿ ಸಭೆ
ನಡೆದಿದ್ದು ಅಧ್ಯಕ್ಷರಾಗಿ ಕೆರೆಹಳ್ಳಿ ರಾಮಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸುನೀಲ್ ಶಿರನಲ್ಲಿ,
ಉಲ್ಲೇಶ್, ಸುಮಾ ಕೆರೆಹಳ್ಳಿ, ಬಿ.ಜುಲೇಖಾ, ಡಿ.ಕೆ. ಮಂಜುನಾಥ್, ಎಸ್.ಸಿ.ಸತ್ಯನಾರಾಯಣ, ಮಹಮದ್
ದಸ್ತಗಿರಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಹಣಗೆರೆಕಟ್ಟೆ ಧಾರ್ಮಿಕ ದತ್ತಿ ಇಲಾಖೆಯ ʼಎʼ ಅಧಿಸೂಚಿತ ದೇವಸ್ಥಾನವಾಗಿದ್ದು ವಾರ್ಷಿಕವಾಗಿ 3 ಕೋಟಿ ಆದಾಯ ಹೊಂದಿದೆ. ಧಾರ್ಮಿಕ ಕೇಂದ್ರಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸಬೇಕು ಎಂಬ ಆಗ್ರಹ ಸಾರ್ವಜನಿಕವಾಗಿ ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು.