ಆರೋಪಿಗೆ 15,000 ದಂಡ ವಿಧಿಸಿದ ನ್ಯಾಯಾಲಯ
ಕುಂದಾದ್ರಿ ಬೆಟ್ಟದಲ್ಲಿ ಮದ್ಯ ಸೇವಿಸಿ ಮೋಜು ಮಸ್ತಿ
ಮದ್ಯ
ಸೇವಿಸಿ ಕಾರು ಚಾಲನೆ ಮಾಡುತ್ತಿದ್ದ ಪ್ರಕರಣ ಸಾಭೀತಾದ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಕಟಪಾಡಿ ಪ್ರಸನ್ನ
ಶೆಟ್ಟಿ (32) ಎಂಬುವವರಿಗೆ 15,000
ದಂಡ ವಿಧಿಸಿ ಶನಿವಾರ ತೀರ್ಥಹಳ್ಳಿಯ ಜೆಎಂಎಫ್ಸಿ ನ್ಯಾಯಾಲಯ ತೀರ್ಪು ನೀಡಿದೆ.
ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಾದ್ರಿ ಬೆಟ್ಟದಲ್ಲಿ ಮದ್ಯ ಸೇವಿಸಿ ಮೋಜು ಮಸ್ತಿ
ಮಾಡಿರುವುದಲ್ಲದೇ ಮತ್ತಿನಲ್ಲಿ ಕಾರು ಚಾಲನೆ ಮಾಡುತ್ತಿರುವುದು ಕಂಡು ಬಂದಿತ್ತು. ಪೊಲೀಸರು ಮದ್ಯ ಸೇವನೆ ತಪಾಸಣಾ ಯಂತ್ರದಲ್ಲಿ ಪರೀಶಿಸಿದಾಗ ಮದ್ಯ ಸೇವನೆ ದೃಢಪಟ್ಟಿತ್ತು.
ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ದೋಷಾರೋಪ ಪಟ್ಟಿ ಆಲಿಸಿದ ನ್ಯಾಯಾಲಯ ಮದ್ಯ ಸೇವಿಸಿ ಕಾರು ಚಾಲನೆ ಮಾಡುತ್ತಿದ್ದ ಆರೋಪಿಗೆ 15,000 ದಂಡ ವಿಧಿಸಿದೆ.
ಕಾರ್ಯಚರಣೆಯಲ್ಲಿ
ಪಿಎಸ್ಐ ರಂಗನಾಥ ಅಂತರಗಟ್ಟಿ, ಎಎಸ್ಐ ಉಮೇಶ್ ನಾಯ್ಕ್, ಸಿಬ್ಬಂದಿಗಳಾದ ಸುನೀಲ್ ಕನ್ನಂಗಿ, ಅನಿಲ್
ಯಡೂರು, ಗಣೇಶ್ ಆಗುಂಬೆ ಇದ್ದರು.