ಬಯೋಕಾನ್ ಸಿಎಫ್ಒ ಆಗಿ ಮುಖೇಶ್ ಕಾಮತ್ ನೇಮಕ

ತೀರ್ಥಹಳ್ಳಿಯ ಚಾರ್ಟೆಡ್‌ ಅಕೌಂಟೆಟ್‌ಗೆ ಉನ್ನತ ಹುದ್ದೆ

ಖ್ಯಾತ ಉದ್ಯಮಿ ಕಿರಣ್ ಮಜುಮ್ದಾರ್ ಒಡೆತನದ ಜಗತ್ವಿಖ್ಯಾತ ಬಯೋಕಾನ್ ಕಂಪನಿಯ ಸಿಎಫ್ಒ (ಚೀಫ್ ಫೈನಾನ್ಸ್ ಆಫೀಸರ್) ಮುಖ್ಯ ಹಣಕಾಸು ಅಧಿಕಾರಿಯಾಗಿ ತೀರ್ಥಹಳ್ಳಿಯ ಮುಖೇಶ್ ಕಾಮತ್ ನೇಮಕಗೊಂಡಿದ್ದಾರೆ.

ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಅನಂತಕಾಮತ್ ಮತ್ತು ಕಸ್ತೂರಿ ಕಾಮತ್ ದಂಪತಿಯ ಪುತ್ರರಾದ ಮುಖೇಶ್ ತಮ್ಮ ವಿಧ್ಯಾಭ್ಯಾಸವನ್ನು ಸೈಂಟ್ ಮೇರೀಸ್, ಹೈಸ್ಕೂಲ್ ಶಿಕ್ಷಣವನ್ನು ಅನಂತಮೂರ್ತಿ ಪ್ರೌಢಶಾಲೆ, ತುಂಗಾ ಮಹಾವಿದ್ಯಾಲಯದಲ್ಲಿ ಕಾಲೇಜು ಶಿಕ್ಷಣವನ್ನು ಪೂರೈಸಿದ್ದಾರೆ.

ಚೆನೈನಲ್ಲಿ 1997 ರಲ್ಲಿ ಚಾರ್ಟೆಡ್ ಅಕೌಂಟೆನ್ಸಿ ಮುಗಿಸಿ 2004 ರಲ್ಲಿ ಬಯೋಕಾನ್ ಕಂಪನಿಗೆ ಸೇರ್ಪಡೆಗೊಂಡರು. ಬಯೋಕಾನ್ ಸಂಸ್ಥೆಯ ಆರ್ಥಿಕ ವಿಭಾಗದ ಅನೇಕ ಹುದ್ದೆಗಳನ್ನು ನಿಭಾಯಿಸಿ ಪ್ರಸ್ತುತ ಕಂಪನಿಯ ಹಣಕಾಸು ವಿಭಾಗದ ಅತ್ಯುನ್ನತ ಹುದ್ದೆಗೆ ನೇಮಕವಾಗಿದ್ದಾರೆ. ಇನ್ಫೊಡೆಸ್ಕ್ ಮಣಿಪಾಲ್ ಲಿಮಿಟೆಡ್, ಯುನೈಟೆಡ್ ಬ್ರೀವರಿಸ್ ಲಿಮಿಟೆಡ್, ಟೆಕ್ಸರ್ ಇನ್ಫೊಟೆಕ್ ಲಿಮಿಟೆಡ್ ಮುಖೇಶ್ ಕೆಲಸ ನಿರ್ವಹಿಸಿದ ಇತರೆ ಕಂಪನಿಗಳು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post