ತೀರ್ಥಹಳ್ಳಿಯ ಚಾರ್ಟೆಡ್ ಅಕೌಂಟೆಟ್ಗೆ ಉನ್ನತ ಹುದ್ದೆ
ಖ್ಯಾತ ಉದ್ಯಮಿ ಕಿರಣ್ ಮಜುಮ್ದಾರ್ ಒಡೆತನದ ಜಗತ್ವಿಖ್ಯಾತ ಬಯೋಕಾನ್ ಕಂಪನಿಯ ಸಿಎಫ್ಒ (ಚೀಫ್ ಫೈನಾನ್ಸ್ ಆಫೀಸರ್) ಮುಖ್ಯ ಹಣಕಾಸು ಅಧಿಕಾರಿಯಾಗಿ ತೀರ್ಥಹಳ್ಳಿಯ ಮುಖೇಶ್ ಕಾಮತ್ ನೇಮಕಗೊಂಡಿದ್ದಾರೆ.
ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಅನಂತಕಾಮತ್ ಮತ್ತು ಕಸ್ತೂರಿ ಕಾಮತ್ ದಂಪತಿಯ
ಪುತ್ರರಾದ ಮುಖೇಶ್ ತಮ್ಮ ವಿಧ್ಯಾಭ್ಯಾಸವನ್ನು ಸೈಂಟ್ ಮೇರೀಸ್, ಹೈಸ್ಕೂಲ್ ಶಿಕ್ಷಣವನ್ನು ಅನಂತಮೂರ್ತಿ ಪ್ರೌಢಶಾಲೆ, ತುಂಗಾ ಮಹಾವಿದ್ಯಾಲಯದಲ್ಲಿ
ಕಾಲೇಜು ಶಿಕ್ಷಣವನ್ನು ಪೂರೈಸಿದ್ದಾರೆ.
ಚೆನೈನಲ್ಲಿ 1997 ರಲ್ಲಿ ಚಾರ್ಟೆಡ್ ಅಕೌಂಟೆನ್ಸಿ ಮುಗಿಸಿ 2004 ರಲ್ಲಿ ಬಯೋಕಾನ್ ಕಂಪನಿಗೆ ಸೇರ್ಪಡೆಗೊಂಡರು. ಬಯೋಕಾನ್ ಸಂಸ್ಥೆಯ ಆರ್ಥಿಕ ವಿಭಾಗದ ಅನೇಕ ಹುದ್ದೆಗಳನ್ನು ನಿಭಾಯಿಸಿ ಪ್ರಸ್ತುತ ಕಂಪನಿಯ ಹಣಕಾಸು ವಿಭಾಗದ ಅತ್ಯುನ್ನತ ಹುದ್ದೆಗೆ ನೇಮಕವಾಗಿದ್ದಾರೆ. ಇನ್ಫೊಡೆಸ್ಕ್ ಮಣಿಪಾಲ್ ಲಿಮಿಟೆಡ್, ಯುನೈಟೆಡ್ ಬ್ರೀವರಿಸ್ ಲಿಮಿಟೆಡ್, ಟೆಕ್ಸರ್ ಇನ್ಫೊಟೆಕ್ ಲಿಮಿಟೆಡ್ ಮುಖೇಶ್ ಕೆಲಸ ನಿರ್ವಹಿಸಿದ ಇತರೆ ಕಂಪನಿಗಳು.