ಮತದಾನ ಬಹಿಷ್ಕಾರ ಹಿಂಪಡೆದ ಗ್ರಾಮಸ್ಥರು
ತೀರ್ಥಹಳ್ಳಿ ತಾಲ್ಲೂಕಿನ ಬಿದರಗೋಡು ಪಂಚಾಯತ್ ಉಳುಮಡಿ ಗ್ರಾಮಸ್ಥರು ಮೂಲಬೂತ ಸೌಕರ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕಾರದ ತೀರ್ಮಾನ ಮಾಡಿದ್ದರು.
ವಿಷಯ ತಿಳಿದ ಶಾಸಕರು ಶುಕ್ರವಾರ ಬೆಳಗ್ಗೆ 8 ರ ಸುಮಾರಿಗೆ ಉಳುಮಡಿಗೆ ಬೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿ ಮತದಾನದ ಅನಿವಾರ್ಯತೆ ತಿಳಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿ ಗ್ರಾಮಸ್ಥರನ್ನು ಮತದಾನ ಮಾಡಲು ವಿನಂತಿಸಿದರು. ಗ್ರಾಮಸ್ಥರು ಪೂರಕವಾಗಿ ಸ್ಪಂದಿಸಿ ಮತದಾನ ಮಾಡುವ ತೀರ್ಮಾನ ತೆಗೆದುಕೊಂಡರು.