ತೀರ್ಥಹಳ್ಳಿಯಲ್ಲಿ
ಹಿಗ್ಗಾಮುಗ್ಗ ಮರಳು ಮಾಫಿಯಾ
“ಆರಗ ಜ್ಞಾನೇಂದ್ರ
ನನ್ನ ಮನೆಯಲ್ಲೆ ಡಿಗ್ರಿ ಮುಗಿಸಿದ್ದು”
“ಅವನ ಕಥೆ ಚುನಾವಣೆ
ನಂತರ ಬಿಚ್ಚಿಡ್ತೀನಿ” – ಕೆ.ಎಸ್. ಈಶ್ವರಪ್ಪ
ಮಾಜಿ ಉಪಮುಖ್ಯಮಂತ್ರಿ,
ಶಿವಮೊಗ್ಗ ಲೋಕಸಭೆ ಚುನಾವಣಾ ಸ್ಪರ್ಧಾಕಾಂಕ್ಷಿ ಕೆ.ಎಸ್. ಈಶ್ವರಪ್ಪ ಶುಕ್ರವಾರ ತೀರ್ಥಹಳ್ಳಿಗೆ ಭರ್ಜರಿ
ಎಂಟ್ರಿ ಕೊಟ್ಟಿರುವ ಅವರು ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನ ಮತ್ತು ಅಂಬುತೀರ್ಥದಲ್ಲಿ
ವಿಶೇಷ ಪೂಜೆ ಸಲ್ಲಿಸಿ ಕಾರ್ಯಕರ್ತರಿಗೆ ಹುರುಪು ನೀಡಿದರು.
ತೀರ್ಥಹಳ್ಳಿಯಲ್ಲಿ
ಹಿಂದೂ ಯುವಕರಿಗೆ ಭದ್ರತೆ ಇಲ್ಲ. ಗೋ ಪ್ರೇಮಿಗಳಿಗೆ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅವರೆಲ್ಲ
ನನನ್ನು ಸಂಪರ್ಕಿಸಿ ಬೆಂಬಲ ಸೂಚಿಸುತ್ತಿದ್ದಾರೆ. ಆರಗ ಜ್ಞಾನೇಂದ್ರ ನನ್ನ ಮನೆಯಲ್ಲೇ ಬೆಳೆದು ಡಿಗ್ರಿ
ಮುಗಿಸಿದ ಹುಡುಗ. ಆತನ ಕ್ಷೇತ್ರದಲ್ಲೇ ಹಿಗ್ಗಾಮುಗ್ಗ ಮರಳು ಮಾಫಿಯಾ ನಡೆಯುತ್ತಿದ್ದರು ತಡೆಯುತ್ತಿಲ್ಲ.
ಬಿ.ವೈ. ರಾಘವೇಂದ್ರ ಹೆಸರು ಕೂಡ ಮರಳು ಮಾಫಿಯಾದಲ್ಲಿ ಪ್ರಸ್ತಾಪ ಆಗುತ್ತಿದೆ. ಚುನಾವಣೆ ಮುಗಿದ ನಂತರ
ನನ್ನ ಸ್ಪರ್ಧೆಯನ್ನು ನಾಮಕಾವಸ್ತೆ ಎಂದ ಆರಗ ಜ್ಞಾನೇಂದ್ರರ ಪೂರ್ಣ ಮಾಹಿತಿ ಬಿಚ್ಚಿಡುತ್ತೇನೆ ಎಂದು
ಗುಟುರು ಹಾಕಿದರು.
ರಾಜ್ಯದ ಜನರಿಗೆ
ಬಿ.ಎಸ್.ಯಡಿಯೂರಪ್ಪ ಕುಟುಂಬ ರಾಜಕಾರಣದ ಬಗ್ಗೆ ಆಕ್ರೋಶ ಇದೆ. ಬಹಳ ಜನ ಬಿಜೆಪಿ ಪ್ರಮುಖರು ನನ್ನ
ಬೆನ್ನ ಹಿಂದೆ ಇದ್ದು ಸೈದ್ಧಾಂತಿಕ ಸ್ಪರ್ಧೆಗೆ ಬೆಂಬಲ ನೀಡುತ್ತಿದ್ದಾರೆ. ಯಡಿಯೂರಪ್ಪ ಯಾವ ಕಾರಣಕ್ಕೂ
ಲಿಂಗಾಯತ ಸಮುದಾಯದ ನಾಯಕ ಅಲ್ಲ. ರಾಜ್ಯದ ಜನರಿಗೆ ಮಂಕುಬೂದಿ ಎರಚಿ ಭ್ರಮೆಗೆ ತಳ್ಳಿದ್ದಾರೆ. ಶಿಕಾರಿಪುರದಲ್ಲೇ
ಸಾದರ ಲಿಂಗಾಯತ ಸಮುದಾಯದ ನಾಗರಾಜ ಗೌಡ ಸೋಲಿಸಲು ವಿಜಯೇಂದ್ರ ತಿಣುಕಾಡಿದ್ದಾರೆ. ಕೋಟ್ಯಾಂತರ ರೂಪಾಯಿ
ಸುರಿದರೂ 60 ಸಾವಿರ ಇದ್ದ ಗೆಲುವಿನ ಅಂತರ 10 ಸಾವಿರಕ್ಕೆ ಇಳಿದಿದ್ದು ಹೇಗೆ ಎಂದು ಪ್ರಶ್ನಿಸಿದರು.
ಏನೇನೋ ಮಾಡಲು ಹೋಗಿ
ಸಿಕ್ಕಿ ಬಿದ್ದವರು ಯಡಿಯೂರಪ್ಪ. ಇಡಿ, ಐಟಿ ಬಲ ಪ್ರಯೋಗ ನಡೆಸಲು ನಂದೇನು ಇಲ್ಲ. ನನ್ನ ಮುಂದೆ ಷಡ್ಯಂತ್ರ,
ಕುತಂತ್ರ, ಬಲಪ್ರಯೋಗ ನಡೆಸಲು ಯಾವನಿಗೂ ತಾಕತ್ತು ಇಲ್ಲ. ಹೊಂದಾಣಿಕೆ ರಾಜಕಾರಣ ಮಾಡಲು ಲೋಕಸಭಾ ಚುನಾವಣೆಗೆ
ದುರ್ಬಲ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಿಸಿಕೊಂಡು ಬಂದಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ
ಎಂದರು.
ಈ ಸಂದರ್ಭದಲ್ಲಿ
ವಾಟಗೋಡು ಸುರೇಶ್, ತ.ಮ.ನರಸಿಂಹ, ಶಿವರಾಜಪುರ ರಾಜೇಶ್, ಕೆಳಕೆರೆ ಅರುಣ್, ಬಿಲಗ ದಿನೇಶ್, ಗೊರಕೋಡು
ಮದನ್ ಇದ್ದರು.