ಅರಣ್ಯ ಇಲಾಖೆ ಉಡಾಫೆ ನೀತಿಗೆ ಸಾರ್ವಜನಿಕರ ಆಕ್ರೋಶ
ತೀರ್ಥಹಳ್ಳಿ ತಾಲ್ಲೂಕಿನ
ಕೋಣಂದೂರು ಸಮೀಪದ ದೇಮ್ಲಾಪುರ ಮುಖ್ಯ ರಸ್ತೆಯಲ್ಲಿ ಅರಣ್ಯ ಇಲಾಖೆ ಬೆಳೆಸಿದ್ದ ಹೈಬ್ರೀಡ್ ನೀಲಗಿರಿ
ಮರವ ಬಿದ್ದು ಸ್ಥಳೀಯರಾದ ಜಯಂತ್ ಭಟ್ (60) ಅಸುನೀಗಿದ್ದಾರೆ. ಕೃಷಿ ಕುಟುಂಬದವರಾದ ಜಯಂತ್ ಭಟ್
ಬೈಕ್ ನಲ್ಲಿ ಚಲಿಸುವಾಗ ಈ ಘಟನೆ ನಡೆದಿದೆ.
ಅರಣ್ಯ ಇಲಾಖೆಯ ಅಪಾಯಕಾರಿ
ಮರಗಳನ್ನು ಕಟಾವು ಮಾಡಲು ದೇಮ್ಲಾಪುರ ಗ್ರಾಮ ಪಂಚಾಯಿತಿ 3 ವರ್ಷಗಳ ಹಿಂದೆಯೇ ನಿರ್ಣಯ ತೆಗೆದುಕೊಂಡಿದೆ.
ಆದರೆ ಅರಣ್ಯ ಇಲಾಖೆಯ ಉಡಾಫೆ ನೀತಿಯಿಂದ ಅಪಾಯಕಾರಿ ಮರವನ್ನು ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸಿದೆ
ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ, ಡಿವೈಎಸ್ಪಿ ಗಜಾನನ ವಾಮನ ಸುತಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.