ಶಿವಮೊಗ್ಗ ಜಿಲ್ಲಾ
ಜೆಡಿಎಸ್ ಉಪಾಧ್ಯಕ್ಷರಾಗಿ ನೇಮಕ
ಯುವ ವಕೀಲನಿಗೆ ಸಂಘಟನೆಯ
ಜವಾಬ್ದಾರಿ
ಜನಪ್ರೀಯ ವಕೀಲ ಹಾಗೂ
ಜೆಡಿಎಸ್ ಕಟ್ಟಾಳುವಾಗಿ ಗುರುತಿಸಿಕೊಂಡಿರುವ ಮೇದೊಳಿಗೆ ರಾಮಸ್ವಾಮಿ ಶಿವಮೊಗ್ಗ ಜಿಲ್ಲಾ ಜೆಡಿಎಸ್
ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಅತ್ಯಂತ ನಿಷ್ಠ ಜೆಡಿಎಸ್ ಕಾರ್ಯಕರ್ತನಾಗಿ, ಯುವ ನಾಯಕನಾಗಿ
ಗುರುತಿಸಿಕೊಂಡಿರುವ ಅವರು ಪಕ್ಷದ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿಯೂ ನಿಷ್ಠೆ ಬದಲಿಸಿಲ್ಲ. ಹಾಗೂ
ಪಕ್ಷದ ಹುದ್ದೆಗಾಗಿ ಲಾಭಿ ಮಾಡಿದವರಲ್ಲ. ಅವರ ಪಕ್ಷ ನಿಷ್ಠೆ ಹಾಗೂ ಸಂಘಟನಾ ಚಾತುರ್ಯ ತಾಲ್ಲೂಕಿನಾದ್ಯಂತ
ಇರುವ ಸಂಪರ್ಕವನ್ನು ಗಮನಿಸಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕಡಿದಾಳ್ ಗೋಪಾಲ್ ನೇಮಿಸಿ ಅದೇಶಿಸಿದ್ದಾರೆ.
ತಮ್ಮ ನೇಮಕವನ್ನು ಸ್ವಾಗತಿಸಿರುವ ಮೇದೊಳಿಗೆ ರಾಮಸ್ವಾಮಿ ಪಕ್ಷ ತನಗೆ ನೀಡಿರುವ ಜವಾಬ್ದಾರಿಯನ್ನು
ಅತ್ಯಂತ ಹೊಣೆಗಾರಿಕೆಯಿಂದ ನಿಭಾಯಿಸುವುದಾಗಿ ತಿಳಿಸಿದ್ದು ಈ ಬಾರಿ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ
ಪಕ್ಷದ ಆದೇಶದಂತೆ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ.ವೈ. ರಾಘವೇಂದ್ರ
ಅವರ ಗೆಲುವಿಗಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.