5 ಸಾವಿರಕ್ಕೂ ಹೆಚ್ಚು ವೀಕ್ಷಕರು ಪಂದ್ಯಕ್ಕೆ ಸಾಕ್ಷಿ
ಪ್ರೇಕ್ಷಕರಿಂದ ತುಂಬಿ ತುಳುಕಿದ ಕ್ರೀಡಾಂಗಣ
4 ದಿನಗಳ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿ ಎಪಿಎಂಸಿ ಆವರಣದಲ್ಲಿ ಅದ್ದೂರಿಯಾಗಿ ಆರಂಭಗೊಂಡಿತು. ಏಕಲವ್ಯ ಸ್ಪೋರ್ಟ್ಸ್ ಕ್ಲಬ್, ಮಾರಿಕಾಂಬಾ ದೇವಸ್ಥಾನ ಸಂಯುಕ್ತ ಆಶ್ರಯದಲ್ಲಿ ವಿವಿಧ ವೇಷಾಭೂಷಣದೊಂದಿಗೆ ಕುಶಾವತಿಯಿಂದ ಅದ್ದೂರಿ ಮೆರವಣಿಗೆ ಸಾಗಿತು. ಮಾರಿಕಾಂಬಾ ದೇವಸ್ಥಾನದಿಂದ ಕ್ರೀಡಾಜ್ಯೋತಿ ಸ್ವೀಕರಿಸಲಾಯಿತು.
“ಕ್ರೀಡೆ ಹವ್ಯಾಸ ನಿವಾರಣೆಯ ಅಸ್ತ್ರ. ಸಂಘಟನಾ ಸಾಮರ್ಥ್ಯದ ಜೊತೆಗೆ ಸತ್ವ, ಶಕ್ತಿ ಇದೆ. ಒಳ್ಳೆಯ ಮನಸ್ಸು ಇರುವವರು ಕ್ರೀಡೆಯಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾರೆ. ಅಲ್ಲದೇ ಮಾನಸಿಕ ದೈಹಿಕ ಕ್ಷಮತೆ ಹೆಚ್ಚಿಸುತ್ತದೆ. ಚಾಣಾಕ್ಷತನ, ಸೂಕ್ಷತೆ, ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ” ಎಂದು ಬಂಗಾರಮಕ್ಕಿ ಮಾರುತಿ ಗುರೂಜಿ ಹೇಳಿದರು.
ಪ್ರಥಮ ಪಂದ್ಯಾವಳಿ ಅತಿಥೇಯ ಕರ್ನಾಟಕ ಮತ್ತು ಕೊಲ್ಲಾಪುರ ತಂಡದೊಂದಿಗೆ ನಡೆಯಿತು. ಕರ್ನಾಟಕ ತಂಡ 20/16 ಅಂಕಗಳಿಂದ ವಿಜೇತರಾಗಿತು. ಪಂದ್ಯಾ ವೀಕ್ಷಣೆಗಾಗಿ ಗ್ಯಾಲರಿ ವ್ಯವಸ್ಥೆ ಕಲ್ಪಿಸಲಾಗಿತ್ತು. 5 ಸಾವಿರಕ್ಕೂ ಹೆಚ್ಚು ಜನರು ಪಂದ್ಯಾವಳಿಯನ್ನು ವೀಕ್ಷಿಸಿದರು.
ವೇದಿಕೆಯಲ್ಲಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿ.ಆರ್. ರಾಘವೇಂದ್ರ ಶೆಟ್ಟಿ, ಮಾರಿಕಾಂಬಾ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಶೆಟ್ಟಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷ ರೆಹಮತ್ ಉಲ್ಲಾ ಅಸಾದಿ, ಪಾಲಿಟೆಕ್ನಿಕ್ ಕಾಲೇಜು ಅಧ್ಯಕ್ಷೆ ಅನಿತಾ ನಾಗರಾಜ್, ಪ್ರಮುಖರಾದ ಪರಿಣಿತ ಮನುದೇವ್, ಪ್ರಸನ್ನ ಕುಮಾರ್, ಲ.ಪಾಂಡುರಂಗಪ್ಪ, ಟಿ.ಕೆ. ರಮೇಶ್ ಶೆಟ್ಟಿ, ಬಾಳೇಹಳ್ಳಿ ಪ್ರಭಾಕರ್, ಬೆಲೋರಿಯನ್ ಡಯಾಸ್ ಮುಂತಾದವರು ಉಪಸ್ಥಿತರಿದ್ದರು.