ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ನಿವಾಸಿಯಾಗಿದ್ದ ದಿವಂಗತ ಸುಧಾಕರ ಶೆಟ್ಟಿ ತೀರ್ಥಹಳ್ಳಿ ತಾಲ್ಲೂಕು ಬಂಟರ ಸಂಘದ ಕ್ರಿಯಾಶೀಲಾ ಸದಸ್ಯ ಹೃದಯಘಾತದಿಂದ ನಿಧನರಾಗಿದ್ದಾರೆ. ಇವರಿಗೆ 60 ವರ್ಷ ವಯಸ್ಸಾಗಿದ್ದು ಇಬ್ಬರು ಪುತ್ರರು ಒಬ್ಬಳು ಪುತ್ರಿ, ಮಾಜಿ ಕೋಣಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರು, ಹಾಲಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಪತ್ನಿ ಗಾಯತ್ರಿ ಶೆಟ್ಟಿಯವರನ್ನ ಹಾಗೂ ಅಪಾರ ಸ್ನೇಹಿತ ಬಳಗವನ್ನು ಅಗಲಿದ್ದಾರೆ. ದಿವಂಗತ ಸುಧಾಕರ ಶೆಟ್ಟಿ "ಕೋಟೆಗದ್ದೆ " ಕುಟುಂಬದವರಾಗಿದ್ದು, ಬಂಟರ ಸಂಘದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಮಾಜದ ಒಳಿತಿಗಾಗಿ ಸದಾ ಚಿಂತಿಸುತಿದ್ದ ಸುಧಾಕರ ಶೆಟ್ಟಿ ನಿಧನದಿಂದಾಗಿ ಬಂಟರ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಅಂತಿಮ ವಿಧಿವಿಧಾನ ಕೋಣಂದೂರಿನ ಅವರ ಸ್ವಗೃಹದಲ್ಲಿ ನಡೆಸಲಾಗುತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ. ತಾಲ್ಲೂಕು ಬಂಟರ ಸಂಘದ ಗೌರವಧ್ಯಕ್ಷ ಅಡ್ಡಮನೆ ಪ್ರಭಾಕರ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ಬಿ.ಎಲ್. ಪ್ರಭಾಕರ ಹೆಗ್ಡೆ ಹಾಗೂ ಕಾರ್ಯದರ್ಶಿ ಬಿ.ಆರ್. ರಾಘವೇಂದ್ರ ಶೆಟ್ಟಿ ಮತ್ತು ಬಂಟರ ಸಂಘದ ಮಹಿಳಾ ವಿಭಾಗದವರು ಕಂಬನಿ ಮಿಡಿದ್ದಿದ್ದಾರೆ.