ತೀರ್ಥಹಳ್ಳಿ ತಾಲೂಕಿನ ಹಿರಿಯ ರಂಗ ಕಲಾವಿದ ಹೊದಲಾ ಸುಬ್ರಾಯಾಚಾರ್ (80) ಅನಾರೋಗ್ಯದಿಂದ ಪಟ್ಟಣದ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ಹೊದಲ -ಅರಳಾಪುರ ಗ್ರಾ.ಪಂ.ವ್ಯಾಪ್ತಿಯ ಸುಬ್ರಾಯಾಚಾರ್ ಹೊದಲದಲ್ಲಿ 70-80ರ ದಶಕದಲ್ಲಿ ರಾಜ್ಯಾದ್ಯಂತ ಮನೆಮಾತಾಗಿದ್ದ ಹೊದಲಾದ ಅಂಬಾ ಮಿತ್ರ ಮಂಡಳಿಯ ಹೆಸರಾಂತ, ವಿಶಿಷ್ಠ ಕಲಾವಿದರಾಗಿದ್ದರು.
ಕಿರುತೆರೆ ನಟರಾಗಿ, ಕುಶಲಕರ್ಮಿಯಾಗಿ, ಆಟೋಚಾಲಕನಾಗಿ, ಮಾಜಿ ಅಂಚೆ ವಿತರಕನಾಗಿ ಕಾರ್ಯನಿರ್ವಹಿಸಿದ್ದ ಇವರು, ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ತಾಲೂಕಿನ ಕಿತ್ತನಗದ್ದೆಯ ಪುತ್ರನ ಮನೆಯಲ್ಲಿ ನೆಲೆಸಿದ್ದರು.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದು,ಮಂಗಳವಾರದಂದು ಇವರ ಅಂತ್ಯಸಂಸ್ಕಾರ ನೆಡೆಯಲಿದೆ.
ಪಟ್ಟಣದ ನಟಮಿತ್ರರು ತಂಡದವರು ಗೋಪಾಲಗೌಡ ರಂಗಮಂದಿರದಲ್ಲಿ 2023 ಸಾಲಿನ ವಿಶ್ವ ರಂಗಭೂಮಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಸುಬ್ರಾಯಾಚಾರ್ ರವರಿಗೆ ರಂಗ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.