2023ರ ವಿಧಾನಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕೇವಲ ಓಟಿಗಾಗಿ ಜನರ ಮುಂದೆ ಕಾಂಗ್ರೆಸ್ ಗ್ಯಾರಂಟಿಯನ್ನು 420 ಕಾರ್ಡ್ ಎಂದು ಜರಿದು ಜನರ ಮುಂದೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಆರಗ ಇಂದು ತಾವೇ ಮುಂದೆ ನಿಂತು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೆೇಶಕ್ಕೆ ತಮ್ಮ ದೊಡ್ಡ ಪೋಟೋ ಬಳಸಿ ಜನರನ್ನು ಸಮಾವೇಶಕ್ಕೆ ಕಳಿಸಿದ್ದು ಗಮನಿಸಿದರೆ ಇಂದು ಕಾಂಗ್ರೆಸ್ ಗ್ಯಾರಂಟಿ ಮಾಡಿರುವ ಜನಪರ ಯೋಜನೆಯನ್ನು ಇವತ್ತು ಒಪ್ಪಿಕೊಂಡಿದ್ದಾರೆ ಎನಿಸುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮ್ರಪಾಲಿ ಸುರೇಶ್ ಲೇವಡಿ ಮಾಡಿದ್ದಾರೆ.
ಇನ್ನಾದರೂ ಆರಗ ಕಾಂಗ್ರೆಸ್ ಜನಪರ ಯೋಜನೆ ಜನರನ್ನು ಹೇಗೆ ತಲುಪುತ್ತದೆ ಎಂಬುದನ್ನು ಅರಿತು ಅದರಿಂದ ಜನರಿಗಾಗುವ ಉಪಯೋಗಳನ್ನು ಅರ್ಥಮಾಡಿಕೊಂಡು ಮಾತಾಡಬೇಕು ಎಂದು ಅಮ್ರಪಾಲಿ ಸುರೇಶ್ ಮನವಿ ಮಾಡಿದ್ದು ಹಳೆಯ ಚುನಾವಣಾ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಆರಗ ಜ್ಣಾನೇಂದ್ರ 420 ಕಾರ್ಡ್ ಎಂದಿರುವ ವೀಡಿಯೋ ಬಹಿರಂಗ ಪಡಿಸಿದ್ದಾರೆ.