ಕೆಲವರಿಗೆ ಕಮೀಷನ್ ವಿಚಾರ ಬಂದಾಗ ರಹೀಮ್ ರೆಹಮಾನ್ ಆಗಿಬರುತ್ತಾರೆ ಧರ್ಮದ ವಿಷಯ ರಾಜಕೀಯದ ವಿಷಯ ಬಂದಾಗ ರಾಮ ಬೇರೆ ರಹೀಮ್ ಬೇರೆ ಯಾಕಾಗುತ್ತಾರೆ ಅಮ್ರಪಾಲಿ ಸುರೇಶ್ ಲೇವಡಿ ಮಾಡಿದ್ದಾರೆ.
ನಮ್ಮ ನಾಯಕರಾದ ಶ್ರೀಯುತ ಕಿಮ್ಮನೆ ರತ್ನಾಕರ್ ಅವರು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರುವವರು ಹಲವು ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಅನೇಕ ದೇವಸ್ಥಾನಗಳಿಗೆ ವೈಯ್ಯುಕ್ತಿಕ ವಾಗಿ ದೇಣಿಗೆಗಳನ್ನು ಸಲ್ಲಿಸಿರುತ್ತಾರೆ ಬಸ್ಟಾಂಡ್ ನಲ್ಲಿ ನಿಂತು ಬಾಯಿಗೆ ಬಂದು ಮಾತನಾಡುವವರಿಗೆ ಇದು ಅರ್ಥ ಆಗುವುದಿಲ್ಲ. ಇಪ್ಪತ್ತು ವರ್ಷಗಳಿಂದ ಜನಪ್ರತಿನಿಧಿಯಾಗಿ ತೀರ್ಥಹಳ್ಳಿ ಪುರಾಧೀಶ ಶ್ರೀ ರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ನಾನು ನೀಡಿದ ದೇಣಿಗೆಯ ಅರ್ಧದಷ್ಟು ಹಣ ನೀಡದ ಬಗ್ಗೆ ಸಮರ್ಥನೆ ನೀಡಲು ಸಾಧ್ಯವೇ ಅಮ್ರಪಾಲಿ ಸುರೇಶ್ ಪ್ರಶ್ನಿಸಿದ್ದಾರೆ ಶ್ರೀ ರಾಮೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕಿಮ್ಮನೆ ಯವರು ಶ್ರಮಿಸಿದ್ದರು ಈಗ ಕೋದಂಡ ರಾಮ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಚಾಲನೆ ನೀಡಲಿದ್ದಾರೆ ಅವರ ಜೊತೆ ತೀರ್ಥಹಳ್ಳಿ ಪ್ರಜ್ಞಾವಂತರು ಜೊತೆಯಾಗಿದ್ದಾರೆ ನಿಮಗೂ ಶ್ರೀ ರಾಮೇಶ್ವರ ಹಾಗೂ ಕೋದಂಡ ರಾಮ ಒಳ್ಳೆಯ ಬುದ್ದಿ ನೀಡಿ ಈ ಕಾರ್ಯದಲ್ಲಿ ಪಾಲ್ಗೊಳ್ಳುವ ಮನಸ್ಸು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಅಮ್ರಪಾಲಿ ಸುರೇಶ್ ಪತ್ರಿಕಾ ಹೇಳಿಕೆ ನೀಡಿದ್ದು ಯಥಾವತ್ತಾಗಿ ಪ್ರಕಟಿಸಲಾಗಿದೆ.