ಮೂವರು ಆರೋಪಿಗಳು ಗಾಯಬ್
ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ವಲಯಾರಣ್ಯ ವಿಭಾಗ ವ್ಯಾಪ್ತಿಯ ಕೀಗಡಿ ಗ್ರಾಮದಲ್ಲಿ ಕಳ್ಳಬೇಟೆಯಿಂದ ಜಿಂಕೆ ಶಿಕಾರಿ ಮಾಡಿ ಮಾಂಸ ಸಿದ್ಧಪಡಿಸುತ್ತಿದ್ದ ಆರೋಪಿ ತಮಿಳುನಾಡು ಮೂಲದ ರಮೇಶ್ (40) ಎಂಬಾತನನ್ನು ಮಂಡಗದ್ದೆ ವಲಯಾರಣ್ಯಾಧಿಕಾರಿ ಎಂ.ಪಿ. ಆದರ್ಶ ನೇತೃತ್ವದ ತಂಡ ಬಂದಿಸಿದೆ.
ಜಿಂಕೆ ತಲೆ, ಕಾಲು, ಮಾಸ ದಾಸ್ತಾನು ಮಾಡುತ್ತಿದ್ದ 3 ಜನ ಆರೋಪಿಗಳು ತಪ್ಪಿಸಿಕೊಂಡಿದ್ದು ಮಂಡಗದ್ದೆ ವಲಯಾರಣ್ಯ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ. ವನ್ಯಜೀವಿ ಸಂರಕ್ಷಣೆ ಕಾಯಿದೆಯಡಿ ಕಳ್ಳಬೇಟೆಯಿಂದ ಪ್ರಾಣಿ ಹತ್ಯೆ ಕೃತ್ಯಕ್ಕೆ 3 ವರ್ಷ ಸೆರೆವಾಸ, 1 ಲಕ್ಷ ರೂಪಾಯಿ ದಂಡ ವಿಧಿಸುವ ಅವಕಾಶ ಇದೆ.
ಡಿಸಿಎಫ್ ಶಿವಶಂಕರ್, ಎಸಿಎಫ್ ಪ್ರಕಾಶ್ ಮಾರ್ಗದರ್ಶನದಲ್ಲಿ ತಂಡ ಕಾರ್ಯಾಚರಣೆ ನಡೆಸಿದೆ. ಡಿಆರ್ ಎಫ್ಓ ಸುಹಾಸ್, ಗಸ್ತು ಅರಣ್ಯ ಪಾಲಕರಾದ ದುರುಗಪ್ಪ, ಮಹಾದೇವ ಕಣ್ಣೂರ, ವಾಹನ ಚಾಲಕ ನವೀನ್ ಮುಂತಾದವರು ಇದ್ದರು.