ಬೆಚ್ಚಿಬಿದ್ದ ‘ಸಿಲಿಕಾನ್ ಸಿಟಿ'
ತೀರ್ಥಹಳ್ಳಿ ಮೂಲದ ಪ್ರತಿಮಾ ಹತ್ಯೆ
ಬೆಂಗಳೂರು ನಗರದಲ್ಲಿ ಗಣಿ-ಭೂ ವಿಜ್ಞಾನ ಇಲಾಖೆಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಸರ್ಕಾರಿ ಅಧಿಕಾರಿಯನ್ನೇ ಕತ್ತುಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿ ಪ್ರತಿಮಾ(37) ಸೇವೆ ಸಲ್ಲಿಸುತ್ತಿದ್ದರು. ತೀರ್ಥಹಳ್ಳಿ ತಾಲ್ಲೂಕಿನ ಕೊಡ್ಲೂರು ಸಮೀಪದ ಕಲ್ಕಟ್ಟೆಯ ಸುಬ್ಬಯ್ಯ ಗೌಡರ ಪುತ್ರಿಯಾಗಿದ್ದಾರೆ. ಇವರು ತುಡ್ಕಿಯ ಸತ್ಯನಾರಾಯಣ ಅವರನ್ನು ವಿವಾಹವಾಗಿದ್ದರು. 13 ವರ್ಷದ ಓರ್ವ ಮಗ ಇದ್ದಾನೆ.
ರಾತ್ರಿ ಇಲಾಖೆಯ ವಾಹನದಲ್ಲಿಯೇ 8 ಗಂಟೆಗೆ ಮನೆಗೆ ಪ್ರತಿಮಾ ಬಂದಿದ್ದರು. ಅವರ ಅಣ್ಣ ಎಷ್ಟೇ ಬಾರಿ ಕರೆ ಮಾಡಿದ್ರೂ ಕರೆ ಸ್ವೀಕರಿಸಿದಂತ ಕಾರಣ, ಬೆಳಗ್ಗೆ ಮನೆಗೆ ಬಂದು ನೋಡಿದಾಗ ಪ್ರತಿಮಾ ಅವರನ್ನು ಕತ್ತುಕೊಯ್ದು ಬರ್ಬರವಾಗಿ ಹತ್ಯೆ ಮಾಡಿರೋ ವಿಷಯ ಬೆಳಕಿಗೆ ಬಂದಿದೆ.
ಇದರಿಂದಾಗಿ ಬೆಚ್ಚಿಬಿದ್ದಂತ ಪ್ರತಿಮಾ ಅಣ್ಣ, ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದಂತ ಪೊಲೀಸರು ಮನೆಯನ್ನು ಪರಿಶೀಲಿಸಿದಾಗ ಯಾವುದೇ ವಸ್ತುಗಳು ಕಳುವಾಗಿಲ್ಲ ಅಂತ ತಿಳಿದು ಬಂದಿದೆ. ಹೀಗಾಗಿ ಇದೊಂದು ಉದ್ದೇಶ ಪೂರ್ವಕ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಯಾರೋ ಪರಿಚಯಸ್ತರೇ ಕೊಲೆ ಮಾಡಿ ಪರಾರಿಯಾಗಿರೋ ಅನುಮಾನ ವ್ಯಕ್ತ ಪಡಿಸಿದ್ದು, ತನಿಖೆ ಕೈಗೊಂಡಿದ್ದಾರೆ