ಕರ್ನಾಟಕ ದಲಿತ ಸಂಘರ್ಷ
ಸಮಿತಿ ಖಂಡನೆ
ಅರಣ್ಯ ಇಲಾಖೆಯಿಂದ ಪರಿಶಿಷ್ಟ
ಜಾತಿಗೆ ಸೇರಿದ ಮಹಿಳೆಗೆ ಅವಮಾನ ಆರೋಪ – ಕ್ರಮಕ್ಕೆ ಆಗ್ರಹ
ಶೇಡ್ಗಾರು ಗ್ರಾಮ ಪಂಚಾಯಿತಿ
ವ್ಯಾಪ್ತಿಯ ತುಂಬ್ರಮನೆ ಗ್ರಾಮದ ಶ್ರೀ ಸಿದ್ಧಿವಿನಾಯಕ ಗ್ರಾಮ ಅರಣ್ಯ ಸಮಿತಿಯ ಸಮಗ್ರ ಪುನರ್ಶ್ಚೇತನ
ತರಬೇತಿ ಕಾರ್ಯಗಾರದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯೆ, ಮಾಜಿ
ಅಧ್ಯಕ್ಷೆ, ಪರಿಶಿಷ್ಟ ಮಹಿಳೆ ಸವಿತ ಕೋಂ ದಿಲೀಪ್ ಅವರನ್ನು ಆಹ್ವಾನಿಸದೆ ಅವಮಾನಿಸಿದ್ದಾರೆ ಎಂದು
ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಸಿಎಫ್ ಅವರಿಗೆ ದೂರು ನೀಡಿದ್ದಾರೆ.
ಇದಕ್ಕೆ ಕಾರಣರಾದ ಅರಣ್ಯ
ಇಲಾಖೆಯ ಸಿಬ್ಬಂದಿಯನ್ನು ಇಲಾಖಾ ತನಿಖೆಗೆ ಒಳಪಡಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನೊಂದ ಪಂಚಾಯಿತಿ ಸದಸ್ಯೆಗೆ ನ್ಯಾಯ ಕೊಡಿಸಲು ಸಂಘಟನೆ ಪರವಾಗಿ ಕೋರಿದ್ದಾರೆ. ಇದನ್ನು ತಾವು
ಕಡೆಗಣಿಸಿದ್ದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಹಾರೋಗೊಳಿಗೆ ವಿಶ್ವನಾಥ್, ತಾಲ್ಲೂಕು ಸಂಚಾಲಕಿ ವರಲಕ್ಷ್ಮೀ ಬಿ, ಮಹಿಳಾ ಜಿ. ಸಂಚಾಲಕಿ ಮಂಜುಳಾ ನಾಗೇಂದ್ರ ಇದ್ದರು.