ಪ್ರಜಾವಾಣಿ ನಿರಂಜನ್‌ಗೆ ಜಿಲ್ಲಾ ಅತ್ಯುತ್ತಮ ವರದಿಗಾರ ಪ್ರಶಸ್ತಿ

ಅಭಿನಂದಿಸಿದ ತಾಲ್ಲೂಕು ಪತ್ರಕರ್ತರ ಸಂಘ
ಅತ್ಯಂತ ಕಿರಿಯ ವಯಸ್ಸಿಗೆ ಮಹತ್ವದ ಪ್ರಶಸ್ತಿ ಪಡೆದ ಪ್ರತಿಭೆ

ಪ್ರಜಾವಾಣಿಯ ತೀರ್ಥಹಳ್ಳಿ ವರದಿಗಾರ ನಿರಂಜನ್‌ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಜಿಲ್ಲಾ ಮಟ್ಟದ ಅತ್ಯುತ್ತಮ ವರದಿಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಾಮಾಜಿಕ ಕಳಕಳಿಯ ವರದಿಯನ್ನು ಗಮನಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನಿರಂಜನ್‌ ಹೊಸ ತಲೆಮಾರಿನ ಅಪಾರ ಭರವಸೆಯ, ತೀವ್ರ ಸಾಮಾಜಿಕ ಕಳಕಳಿಯ ತುಡಿತವುಳ್ಳ ಯುವ ಪತ್ರಕರ್ತನಾಗಿದ್ದು ಅವರ ವರದಿಗಳು ಪ್ರಜಾವಾಣಿ ಪತ್ರಿಕೆಯ ಉಜ್ವಲ ಪರಂಪರೆಯ ಹಾಗೂ ಸಾಮಾಜಿಕ ಬದ್ಧತೆಗೆ ಪೂರಕವಾಗಿ ಮೂಡಿಬಂದಿವೆ ಎಂಬ ಮೆಚ್ಚುಗೆಗೆ ಪಾತ್ರವಾಗಿವೆ.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿಯನ್ನು ಮೊದಲ ರ್ಯಾಂಕ್‌  ಜೊತೆಗೆ ಪಡೆದಿರುವ   ಈ ಪ್ರತಿಭಾವಂತ, ಪತ್ರಿಕೋದ್ಯಮ ಮಾತ್ರವಲ್ಲದೇ ಸಾಹಿತ್ಯ, ನಾಟಕ, ಪ್ರಸಾಧನಕಲೆ, ಸಾಮಾಜಿಕ ಚಳವಳಿ ಮುಂತಾದ ಬಹು ವಿಚಾರಗಳಲ್ಲಿಆಸಕ್ತಿಯನ್ನು ಹೊಂದಿದ್ದು ಲವಲವಿಕೆ ವ್ಯಕ್ತಿತ್ವದ ಬರಹಗಾರರಾಗಿದ್ದಾರೆ. ತಾಲ್ಲೂಕು ಪತ್ರಕರ್ತರ ಸಂಘ ನಿರಂಜನ್‌ ಅವರನ್ನು ಅಭಿನಂದಿಸಿದೆ. ನೆಲದ ಧ್ವನಿ ಬಳಗದ ಕಿರಿಯ ಸದಸ್ಯನಾಗಿರುವ ಈ ಪ್ರತಿಭೆಯನ್ನು ಧ್ವನಿ ಬಳಗ ಕೂಡಾ ಹಾರ್ದಿಕವಾಗಿ ಅಭಿನಂದಿಸಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post