ರಾಷ್ಟ್ರೀಯ ಹಬ್ಬಗಳ
ಮಹತ್ವ ತಿಳಿಸಲು ವಿಫಲ
ಶಿಕ್ಷಣ ಇಲಾಖೆ ನಿರ್ಲಕ್ಷ್ಯ
- ನಿಶ್ಚಲ್ ಜಾದೂಗಾರ್ ಅಸಮಾಧಾನ
ಬಹುತೇಕ ರಾಷ್ಟ್ರೀಯ
ಹಬ್ಬಗಳಲ್ಲಿ ಖಾಸಗಿ ಶಾಲೆಗಳು ಮಕ್ಕಳಿಗೆ ರಜೆ ನೀಡುತ್ತಿದ್ದು ಭಾರತದ ಸ್ವಾತಂತ್ರ ಇತಿಹಾಸ, ದಾರ್ಶನಿಕರ
ಜೀವನ ಚರಿತ್ರೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಇಲ್ಲವಾಗಿದೆ. ಸೋಮವಾರ ಬಹುತೇಕ ಶಾಲೆಗಳು ಕಾಟಾಚಾರಕ್ಕೆ
ಗಾಂಧಿ ಜಯಂತಿ ಆಚರಿಸಿರುವುದು ಖಂಡನೀಯ ಎಂದು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನಿಶ್ಚಲ್
ಜಾದೂಗಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕು ಆಡಳಿತ
ಯಾವುದೇ ಕಾಳಜಿ ಇಲ್ಲದೆ ರಾಷ್ಟ್ರೀಯ ಹಬ್ಬ ಆಚರಿಸಿದೆ. ಪಟ್ಟಣ ಪಂಚಾಯಿತಿ ಕೂಡ ಈ ವಿಚಾರದಲ್ಲಿ ಮೌನ
ವಹಿಸಿ ಮಕ್ಕಳಿಗೆ ಇತಿಹಾಸ ಮಹತ್ವ ತಿಳಿಸುವಲ್ಲಿ ವಿಫಲವಾಗಿದೆ. ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ
ಗಾಂಧೀ ತತ್ವಗಳು ಎಳೆಯ ಮಕ್ಕಳಿಗೆ ಬಹುಮುಖ್ಯ ಮಾನದಂಡವಾಗಬೇಕು. ಅದರಲ್ಲೂ ಅಹಿಂಸಾ ತತ್ವದ ಬಗ್ಗೆ ಕನಿಷ್ಠ
ಗಾಂಧೀ ಜಯಂತಿ ದಿನದಂದಾದರು ಮಕ್ಕಳಿಗೆ ತಿಳಿಹೇಳುವ ಮಹತ್ವದ ಜವಾಬ್ದಾರಿ ನಿರ್ವಹಿಸಬೇಕು. ಮಕ್ಕಳನ್ನು
ಸಮಾಜಕ್ಕೆ ಬೇಕಾಗುವ ಉತ್ತಮ ಪ್ರಜೆಗಳನ್ನಾಗಿಸುವ ಜವಾಬ್ದಾರಿ ಎಲ್ಲರ ಮೇಲಿದ್ದು ಸರ್ಕಾರ ಈ ಬಗ್ಗೆ
ಗಂಭೀರವಾಗಿ ಚಿಂತಿಸಬೇಕು. ಶಿಕ್ಷಣ ಇಲಾಖೆ ರಜೆ ಘೋಷಣೆ ಮಾಡುವ ಬದಲು ಇಂತಹ ದಿನದಂದು ವಿಶೇಷ ಕಾರ್ಯಕ್ರಮಗಳನ್ನು
ಶಾಲೆಯಲ್ಲಿ ಆಯೋಜಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೂಡಲೇ ಸರ್ಕಾರ ಗಂಭೀರವಾಗಿ
ಈ ವಿಚಾರದ ಬಗ್ಗೆ ಯೋಚಿಸಿ, ಸಾಹಿತಿಗಳು, ಬರಹಗಾರರು, ಬುದ್ಧಿಜೀವಿಗಳು, ಚಿಂತಕರ ಸಲಹೆ ಪಡೆಯುವುದು
ಸೂಕ್ತ ಹಾಗೂ ಮುಂದಿನ ದಿನಮಾನಗಳಲ್ಲಿ ಗಾಂಧೀ, ಬುದ್ಧ, ಬಸವ, ಅಂಬೇಡ್ಕರ್, ನಾರಾಯಣಗುರು, ದಾಸ, ಶ್ರೇಷ್ಠರಾದಿಯಾಗಿ,
ದಾರ್ಶನಿಕರ, ಸಮಾಜ ಸುಧಾರಕರ ಸಾಧನೆ-ಸುಧಾರಣೆಗಳನ್ನು ಮಕ್ಕಳಿಗೆ ಕಡ್ಡಾಯವಾಗಿ ತಿಳಿಸುವ ಕೆಲಸ ಶಿಕ್ಷಣ
ಇಲಾಖೆ ಮಾಡಲಿ ಎಂದು ನಿಶ್ಚಲ್ ಜಾದೂಗಾರ್ ಶಿಕ್ಷಣ ಇಲಾಖೆಗೆ ಸಲಹೆ ನೀಡಿದ್ದಾರೆ.