ಗುರುಪ್ರಸಾದ್ ಕಾಂಕ್ರಿಟ್
ಪ್ರಾಡಕ್ಟ್ಸ್ ಕಾರ್ಮಿಕರಿಂದ ಸ್ವಚ್ಚತೆ
ಮಧುರಾಜ್ ಹೆಗ್ಡೆ
ನೇತೃತ್ವದಲ್ಲಿ ಆಂದೋಲನ
ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ರಾಷ್ಟ್ರೀಯ ಹೆದ್ದಾರಿ-169ರ ಇಕ್ಕೆಲಗಳಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತೆ ನಡೆಯಿತು. ಮಾಳೂರಿನ ಗುರುಪ್ರಸಾದ್ ಕಾಂಕ್ರಿಟ್ ಪ್ರಾಡಕ್ಟ್ಸ್ ಕಾರ್ಮಿಕರು ಸ್ವಚ್ಚತೆಯ ಮೂಲಕ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಿ ಗಮನ ಸೆಳೆದಿದ್ದಾರೆ.
ತೂದೂರು ಗ್ರಾಮ ಪಂಚಾಯಿತಿ ಸದಸ್ಯ, ಮಾಜಿ ಅಧ್ಯಕ್ಷ ಮಧುರಾಜ್ ಹೆಗ್ಡೆ ಕಂಪನಿ ಕಾರ್ಮಿಕರನ್ನು ಪ್ರೇರೇಪಿಸುವ ಮೂಲಕದ ರಾಷ್ಟ್ರೀಯ ಹೆದ್ದಾರಿ ಸ್ವಚ್ಚತೆಗೆ ಆದ್ಯತೆ ನೀಡಿದ್ದಾರೆ. ಸ್ವಚ್ಚತೆಯೇ ಸೇವೆ ಟ್ಯಾಗ್ ಲೈನ್ ಅಡಿಯಲ್ಲಿ ನನ್ನ ಗ್ರಾಮ ಸ್ವಚ್ಚ ಗ್ರಾಮ ಎಂಬ ಘೋಷಣೆಗಳನ್ನು ಮೊಳಗಿಸುತ್ತ ಬೀದಿಗಳನ್ನು ಸ್ವಚ್ಚಗೊಳಿಸಿದರು.
ಅಲ್ಲದೇ ಗುರುಪ್ರಸಾದ್ ಕಾಂಕ್ರಿಟ್ ಪ್ರಾಡಕ್ಟ್ಸ್ ನುರಿತ ಕಾರ್ಮಿಕರ ಸೇವಾ ಬದ್ಧತೆಯಿಂದ ತೂದೂರು ಭಾಗದ ಹತ್ತಾರು ಗುಂಡಿಗಳನ್ನು ಕಾಂಕ್ರಿಟ್ಗಳ ಮೂಲಕ ಮುಚ್ಚಿ ಸೈ ಎನಿಸಿಕೊಂಡಿದ್ದಾರೆ. ಈ ತಂಡದ ವಿಶೇಷ ಪ್ರಯತ್ನದಿಂದಾಗಿ ಸ್ಥಳೀಯವಾಗಿ ಹೆದ್ದಾರಿಯಲ್ಲಿದ್ದ ಅನೇಕ ಗುಂಡಿಗಳಿಗೆ ಅಂತ್ಯ ಕಂಡಿದೆ. ಪ್ರಯಾಣಿಕರು ಈ ಭಾಗದಲ್ಲಿ ಸುಖಕರ ಪ್ರಯಾಣ ಬೆಳೆಸುವಂತಾಗಿದ್ದು ಇವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
.jpeg)
.jpeg)


