ತೀರ್ಥಹಳ್ಳಿಗೆ ಕೀರ್ತಿ ತಂದ ಆರ್ಯನ್

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪ್ರತಿಭಾವಂತ ಯುವಕ

ಆಗುಂಬೆ ಎವಿಎಂ ಶಾಲೆಯ ವಿದ್ಯಾರ್ಥಿ ಆರ್ಯನ್  ಕಳೆದ 22ಮತ್ತು 23 ರಂದು ಬೆಂಗಳೂರಿನಲ್ಲಿ ನಡೆದ ಶಾಲಾ ಹಂತದ ವಾಲಿಬಾಲ್ ಸ್ಪರ್ಧೆಯಲ್ಲಿ ಅದ್ಭುತ ಅಲ್ ರೌಂಡ್ ಪ್ರದರ್ಶನ ನೀಡುವ ಮೂಲಕ ಶಿವಮೊಗ್ಗ ವಿಭಾಗ ಚಾಂಪಿಯನ್ ಆಗಲು ಪ್ರಮುಖ ಪಾತ್ರ ವಹಿಸಿದ್ದಲ್ಲದೆ ರಾಷ್ಟ್ರ ಮಟ್ಟಕ್ಕೆ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿ ತೀರ್ಥಹಳ್ಳಿಗೆ ಗೌರವ ತಂದಿದ್ದಾನೆ.

ತಾಲೂಕು, ಜಿಲ್ಲಾ, ಮಟ್ಟದಲ್ಲಿ ಚೆತೋಹಾರಿ ಪ್ರದರ್ಶನ ನೀಡಿದ್ದ ಆರ್ಯನ್ ವಿಭಾಗ ಮಟ್ಟದಲ್ಲಿ ಬೆಂಗಳೂರು ಸ್ಪೋರ್ಟ್ಸ್ ಹಾಸ್ಟೆಲ್ ತಂಡವನ್ನು ಸೋಲಿಸಲು ದಿಟ್ಟ ಆಟವಾಡಿದ್ದು ಆ ಸಂಧರ್ಭದಲ್ಲಿ ಹಾಜರಿದ್ದ ರಾಜ್ಯ ಮಟ್ಟದ ಆಯ್ಕೆಗಾರರ ಗಮನ ಸೆಳೆಯಿತು.

ವಿಶೇಷ ಎಂದರೆ ಆಗುಂಬೆ ಎ ವಿ ಎಂ ಶಾಲೆಯಲ್ಲಿ ಅನಿವಾರ್ಯ ಕಾರಣ ದಿಂದ ಈ ಬಾರಿ ಕ್ರೀಡಾ ಶಿಕ್ಷಕರು ಸೂಕ್ತ ತರಬೇತಿ ನೀಡಲು ಲಭ್ಯರಿರಲಿಲ್ಲ. ಆದರೂ ಹಿಂದಿನ ದಿನಗಳ ತರಬೇತಿ ಮತ್ತು ಪ್ರಚಂಡ ಆತ್ಮ ವಿಶ್ವಾಸವನ್ನೆ ನೆಚ್ಚಿಕೊಂಡ ಆರ್ಯನ್ ತನ್ನ ತಂಡದ ನಾಯಕತ್ವ ವಹಿಸಿ ಜಯದ ಹಾದಿಗೆ ಮುನ್ನಡೆಸಿ ತಾನು ಕೂಡ ಸರ್ವ್, ಡಿಫೆಂನ್ಸ್, ಬ್ಲಾಕಿಂಗ್ ಎಲ್ಲದರಲ್ಲೂ ಮಿಂಚಿ ಸೂಕ್ತ ತರಬೇತಿ ದೊರೆತಲ್ಲಿ ಉಜ್ವಲ ಭವಿಷ್ಯ ಹೊಂದುವ ಭರವಸೆ ಮೂಡಿಸಿದ್ದಾನೆ. ಈ ಪ್ರತಿಭಾವಂತ ಕುರುವಳ್ಳಿ ಅನಿಲ್ ಮತ್ತು ರಮ್ಯಾ ಅನಿಲ್ ದಂಪತಿಗಳ ಮಗ.

ಆರ್ಯನ್‌ ಜೊತೆಯಲ್ಲಿಯೇ ಅತ್ಯುತ್ತಮ ಆಟವಾಡಿದ ಸಮಿತ್‌ ಕೂಡ ಗಮನ ಸೆಳೆದಿದ್ದಾನೆ. ಈ ಪ್ರತಿಭಾವಂತ ಮೇಲಿನ ಕುರುವಳ್ಳಿ ಮಂಜು ಟೈಲ್ಸ್‌ ಮಂಜುನಾಥ್‌ ದಂಪತಿಗಳ ಪುತ್ರ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post