ಬಿಜೆಪಿ ಅಧ್ಯಕ್ಷರು
ಮತ್ತು ಸಿಎಲ್ಪಿ ಸ್ಥಾನ ಪೂರ್ತಿ ಸೆಟಲ್ ಆಗಲ್ಲ
ಬಿಜೆಪಿ ಎರಡು ಪಕ್ಷವಾಗಬಹುದು
ಉಪವಾಸ ಸತ್ಯಾಗ್ರಹದಲ್ಲಿ
ಕಿಮ್ಮನೆ ರತ್ನಾಕರ್ ವ್ಯಂಗ್ಯ
ಕರ್ನಾಟಕದಲ್ಲಿ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆಯುತ್ತಿದ್ದರು ಬಿಜೆಪಿ ಪಕ್ಷಕ್ಕೆ ವಿರೋಧ ಪಕ್ಷದ ನಾಯಕ ಯಾರು ಎಂದು ಹೇಳಲು ಕೂಡ ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ವಿಧಾನಸಭೆ ಅಧಿವೇಶನ ಆರಂಭಗೊಂಡಿದ್ದು ಮೊದಲ ದಿನ ಮಧ್ಯಾಹ್ನ ಚೀಟಿ ಹಾರಿಸಿ ಲಾಟರಿ ಮೂಲಕ ವಿರೋಧ ಪಕ್ಷ ಸ್ಥಾನ ಆಯ್ಕೆ ಮಾಡಬಹುದು ಎಂದು ಶಿವಮೊಗ್ಗದ ಗಾಂಧಿ ಪಾರ್ಕ್ನ ಮುಂಭಾಗ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ವ್ಯಂಗ್ಯವಾಡಿದ್ದಾರೆ.
ಬಿಜೆಪಿಗರ ಡಿಎನ್ಎ ಅಲ್ಲಿಯೇ ದ್ವೇಶ ರಾಜಕಾರಣ ಹುದುಗಿಕೊಂಡಿದೆ. ದೇಶದಲ್ಲಿ ಧರ್ಮ, ಜಾತಿನ ನಡುವೆ ಸಂಘರ್ಷ ಹೆಚ್ಚು ಮಾಡಿದ್ದೇ ಕೇಂದ್ರ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಅವರು ತಮ್ಮ ಬೆಂಬಲಿಗರಿಗೂ ಅದೇ ಪಾಠ ಮಾಡುತ್ತಿದ್ದು ಸಮಾಜವನ್ನು ಧರ್ಮದ ಆಧಾರದಲ್ಲಿ ಒಡೆಯುತ್ತಿದ್ದಾರೆ. ಈಗ ಕಾಂಗ್ರೆಸ್ ದ್ವೇಶ ರಾಜಕಾರಣ ಮಾಡುತ್ತಿದೆ ಎಂದು ಹೇಳುವ ಮೂಲಕ ಧರ್ಮವನ್ನು ಮುನ್ನೆಲೆಗೆ ಯತ್ನ ನಡೆಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ರಾಜ್ಯದಲ್ಲಿ 65 ಸೀಟುಗಳನ್ನು
ಪಡೆಯುವ ಮೂಲಕ ಅತಿದೊಡ್ಡ ವಿರೋಧಪಕ್ಷವಾಗಿ ಹೊರಹೊಮ್ಮಿದ್ದರು ಬಿಜೆಪಿಗೆ ತಮ್ಮ ಸ್ಥಾನಮಾನವನ್ನು ಅರಗಿಸಿಕೊಳ್ಳಲು
ಸಾಧ್ಯವಾಗುತ್ತಿಲ್ಲ. ರಾಜ್ಯದ ಬಿಜೆಪಿ ಇಬ್ಬಾಗವಾಗುವ ಸಾಧ್ಯತೆ ಹೆಚ್ಚಿದ್ದು ಅಧ್ಯಕ್ಷ ಸ್ಥಾನ ಮತ್ತು
ವಿರೋಧ ಪಕ್ಷದ ಸ್ಥಾನ ಪೂರ್ತಿ ಸೆಟಲ್ ಆಗಲು ಸಾಧ್ಯವವಿಲ್ಲ. ಒಂದು ವೇಳೆ ಆಯ್ಕೆ ಮಾಡಿದರು ಪಕ್ಷದ
ಇನ್ನಷ್ಟು ಒಡೆದು ಹೋಗಲಿದೆ. ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ ಎಂದು ಗೊತ್ತಿಲ್ಲದವರು ಸಂಸದರಾಗಿದ್ದಾರೆ.
ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತೇನೆ ಎನ್ನುತ್ತಿದ್ದವರು ರಿವರ್ಸ್ ಹೊಡೆದಿದಾರೆ. ಬಿಜೆಪಿ
ಬೆಳೆಯಲು ಮಾತ್ರ ಇವರನ್ನು ಬಳಕೆ ಮಾಡಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ.
ಸತ್ಯಾಗ್ರಹದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್ ಎಮ್ ಮಂಜುನಾಥ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎಸ್ ರಮೇಶ್, , ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೇಶ್, ಮರಿಯಪ್ಪ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ವೇದಾ, ಜಿಲ್ಲಾ ಮುಖಂಡರಾದ ವಿಜಯಕುಮಾರ್, ದುಗ್ಗಪ್ಪ ಗೌಡ, ವಿಶ್ವನಾಥ್ ಶೆಟ್ರು, ತೀರ್ಥಹಳ್ಳಿ ಬ್ಲಾಕ್ ಅಧ್ಯಕ್ಷ ಕೆಸ್ತೂರ್ ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ಮುಡುಬ ರಾಘವೇಂದ್ರ, ಯುವ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ, ಪ್ರಧಾನ ಕಾರ್ಯದರ್ಶಿ ಚೇತನ್ ಗೌಡ, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಮುಂತಾದವರು ಇದ್ದರು.