ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ
ಜಿಲ್ಲಾ ವಿಶೇಷ ಆಹ್ವಾನಿತ ಪ್ರತಿನಿಧಿಯಾಗಿ ಹಿರಿಯ
ಪ್ರತ್ರಕರ್ತ ಟಿ.ಕೆ. ರಮೇಶ್ ಶೆಟ್ಟಿ ನೇಮಕ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ
ಜಿಲ್ಲಾ ವಿಶೇಷ ಆಹ್ವಾನಿತರಾಗಿ ತೀರ್ಥಹಳ್ಳಿಯ ನಿಮ್ಮ ಅಂತರಂಗ ವಾರ ಪತ್ರಿಕೆಯ ಸಂಪಾದಕ ಹಿರಿಯ ಪತ್ರಕರ್ತ
ಟಿ.ಕೆ. ರಮೇಶ್ ಶೆಟ್ಟಿ ಇವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯದ ಹಿರಿಯ ಪತ್ರಕರ್ತರಲ್ಲಿ ಒಬ್ಬರಾಗಿರುವ
ಟಿ.ಕೆ. ರಮೇಶ್ ಶೆಟ್ಟಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮೂರು ಅವಧಿಗೆ ಅಧ್ಯಕ್ಷರಾಗಿ ಸಮರ್ಥವಾಗಿ
ಮುನ್ನಡೆಸಿದ್ದಾರೆ. ಉತ್ತಮ ಲೇಖಕರಾಗಿಯೂ ಜನಪ್ರೀಯರಾಗಿರುವ ಅವರು ಹಾಲಿ ತಾಲ್ಲೂಕು ಕನ್ನಡ ಸಾಹಿತ್ಯ
ಪರಿಷತ್ತು ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಿಕ್ಯೋದ್ಯಮದ ಅವಿರತ ಸೇವೆಗಾಗಿ ಅವರಿಗೆ ಜೀವಮಾನದ ಉತ್ತಮ ಸಾಧನೆ ಪ್ರಶಸ್ತಿಯನ್ನು ಈ ಹಿಂದೆ ಜಿಲ್ಲಾ ಸಂಘ ನೀಡಿ ಗೌರವಿಸಿದೆ.
ಅವರ ನೇಮಕವನ್ನು ತಾಲ್ಲೂಕು ಕಾರ್ಯನಿರತ
ಪತ್ರಕರ್ತರ ಸಂಘದ ಪರವಾಗಿ ಅಧ್ಯಕ್ಷ ಮುನ್ನೂರು ಮೋಹನ್, ಪ್ರಧಾನ ಕಾರ್ಯದರ್ಶಿ ಕೋಣಂದೂರು ಮುರುಘರಾಜ್ ಸ್ವಾಗತಿಸಿದ್ದು ಹೃತ್ಪೂರ್ವಕ ಅಭಿನಂದನೆಗಳನ್ನು
ಸಲ್ಲಿಸಿದ್ದಾರೆ.