ತೀರ್ಥಹಳ್ಳಿ ತಾಲ್ಲೂಕು ಈಡಿಗ ಸಂಘದ ಗೌರವಾಧ್ಯಕ್ಷರಾದ ತೂದೂರು ಗ್ರಾ.ಪಂ. ವ್ಯಾಪ್ತಿಯ ರುದ್ರಾಕ್ಷಿಕೊಪ್ಪದ ಆರ್.ಆರ್. ಚಂದ್ರಪ್ಪ (64) ಇಂದು ಮೃತರಾದರು. ಮೃದು ಸ್ವಭಾವದ ಚಂದ್ರಪ್ಪ ಸಾರ್ವಜನಿಕ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದು ಜನಾನುರಾಗಿದ್ದಾರು.
ಹಾಲಿ ತೂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದರು. ಶರಾವತಿ ಪತ್ತಿನ ಸಹಕಾರ ಸಂಘ, ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಡಾ. ರಾಜ್ ಕುಮಾರ್, ಎಸ್ ಬಂಗಾರಪ್ಪ ಕುಟುಂಬಕ್ಕೆ ಹತ್ತಿರ ಸಂಬಂಧಿಗಳಾಗಿದ್ದ ಅವರು 2005ರಲ್ಲಿ ಮಂಡಗದ್ದೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದರು.
ಹಿರಿಯ ಕಾಂಗ್ರೆಸ್ ಮುಖಂಡರಲ್ಲದೇ ಕೋಣಂದೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಚಂದ್ರಪ್ಪ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ನೆಲದ ಧ್ವನಿ ಬಳಗ ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಕೋರುತ್ತದೆ.