7.45 ಲಕ್ಷ ಮೌಲ್ಯದ
ವಿದ್ಯಾರ್ಥಿ ವೇತನ ಪುರಸ್ಕಾರ
ನ್ಯಾಷನಲ್ ಸಮೂಹ ಸಂಸ್ಥೆಯ
ಕಾರ್ಯಕ್ಕೆ ಮೆಚ್ಚುಗೆ
ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸುವುದು ಸಮಾಜದ ಕರ್ತವ್ಯವಾಗಿದೆ. ಸಕಾಲದ ಮಾರ್ಗದರ್ಶನ ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದು ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಜಿ.ಕೆ. ಪಂಡಿತ್ ಭಾನುವಾರ ವಿದ್ಯಾಧಿರಾಜ ಸಭಾಭವನದಲ್ಲಿ ಹಾಜಿ ಶೇಖ್ ಅಹಮದ್ ಚಾರಿಟೇಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೀರ್ಥಹಳ್ಳಿಯ ಸುಪ್ರಸಿದ್ದ ನ್ಯಾಷನಲ್ ಗೋಲ್ಡ್ ಆಂಡ್ ಡೈಮಂಡ್ಸ್
ಸಂಸ್ಥೆಯ ವತಿಯಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ತರಗತಿಗಳಲ್ಲಿ ಶೇ. 85 ಕ್ಕೂ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಿದ ಅವರು ಶೈಕ್ಷಣಿಕ ಬದುಕಿನಲ್ಲಿ ಯಶಸ್ಸು ಸಾಧಿಸಲು ಓದು ಬಹಳ ಮುಖ್ಯವಾಗಿದೆ. ಪಠ್ಯೇತರ
ಚಟುವಟಿಕೆ ಓದಿಗೆ ತಕ್ಕಂತೆ ಜ್ಞಾನ ಸಂಪಾದನೆಗೆ ಅನುಕೂಲ ಮಾಡುತ್ತದೆ. ಬಡ ವಿದ್ಯಾರ್ಥಿಗಳಿಗಾಗಿ ಕೆನರಾ
ಬ್ಯಾಂಕ್ ₹4 ಲಕ್ಷ ಭದ್ರತೆ ಇಲ್ಲದೆ ಶೈಕ್ಷಣಿಕ ಸಾಲ ನೀಡುತ್ತಿದೆ.
ವಿದ್ಯಾರ್ಥಿಗಳು ಸಾಲ ಸೌಲಭ್ಯ ಬಳಸಿಕೊಳ್ಳುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
“ವಿದ್ಯಾರ್ಥಿಗಳು ಶೈಕ್ಷಣಿಕ
ಸಾಧನೆಯ ಜೊತೆಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು. ದೂರದೃಷ್ಟಿಯ ಚಿಂತನೆ ರೂಪಿಸಿಕೊಂಡಾಗ ಸಾಧನೆ
ಸಾಧ್ಯ. ಸಮಾಜಮುಖಿ ಕೆಲಸಗಳನ್ನು ಮುಕ್ತವಾಗಿ ಮಾಡಿದರೆ ಮಾತ್ರ ಫಲ ಸಿಗುತ್ತದೆ ಎಂದು ನ್ಯಾಷನಲ್
ಗೋಲ್ಡ್ ಅಂಡ್ ಡೈಮಂಡ್ ಪಾಲುದಾರ ಯೂಸೂಫ್ ಹೈದರ್ ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್
ವತಿಯಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 543 ವಿದ್ಯಾರ್ಥಿಗಳಿಗೆ
₹7.45 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ನೀಡಲಾಯಿತು.
ವೇದಿಕೆಯಲ್ಲಿ ನ್ಯಾಷನಲ್ ಸಮೂಹ ಸಂಸ್ಥೆಯ ಇಬ್ರಾಹಿಂ ಷರೀಫ್ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ರೆಹಮಾನ್, ಅಬ್ದುಲ್ ಕಲಾಂ ಆಜಾದ್, ಸುಲೇಮಾನ್, ಕಬೀರ್ ಇದ್ದರು.