ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಭಾಗಿ
ತೀರ್ಥಹಳ್ಳಿ ತಾಲ್ಲೂಕಿನ
ಗುಡ್ಡೇಕೊಪ್ಪ ಯಕ್ಷರಂಗದ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಾರ್ಚ್ 22ರ
ಸಂಜೆ 5.30ಕ್ಕೆ ಯುಗಾದಿ ಹಬ್ಬದ ಅಂಗವಾಗಿ ಭೀಷ್ಮಾರ್ಜುನ ಯಕ್ಷಗಾನ ತಾಳ ಮದ್ದಳೆ ಕಾರ್ಯಕ್ರಮ ಏರ್ಪಡಿಸಲಾಗಿದೆ
ಎಂದು ಗುಡ್ಡೇಕೊಪ್ಪ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯ ಅತಿಥಿಯಾಗಿ
ಗೃಹಸಚಿವ ಆರಗ ಜ್ಞಾನೇಂದ್ರ ಭಾಗವಹಿಸಲಿದ್ದಾರೆ. ಹಿಮ್ಮೇಳದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ,
ಪದ್ಮನಾಭ ಉಪಾಧ್ಯ, ರೋಹಿತ್ ಉಚ್ಚಿಲ, ಬಡಗು -ಕು.ರಕ್ಷಾ ಹೆಗಡೆ, ಎನ್.ಜಿ.ಹೆಗಡೆ, ಶ್ರೀಕಾಂತ್ ಶೆಟ್ಟಿ
ಅರ್ಥದಾರಿಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಎಂ. ಪ್ರಭಾಕರ ಜೋಷಿ, ರಾಜ್ಯ ಪ್ರಶಸ್ತಿ ಪುರಸ್ಕೃತ
ಎಂ.ಕೆ.ರಮೇಶ್ ಆಚಾರ್ಯ, ಯಕ್ಷಶೀರೋಮಣಿ ಉಜಿರೆ ಅಶೋಕ್ ಭಟ್, ಯಕ್ಷಕವಿ ಪವನ್ ಕಿರಣಕೆರೆ ಭಾಗವಹಿಸಲಿದ್ದಾರೆ.
ಯಕ್ಷಗಾನ ಪ್ರಿಯರು ಯಕ್ಷಗಾನ ತಾಳ ಮದ್ದಳೆ ರಸದೌತಣ ಸವಿಯಬೇಕೆಂದು ಕೋರಿದ್ದಾರೆ.