10 ಸಾವಿರ
ಪ್ರೇಕ್ಷಕರ ನಿರೀಕ್ಷೆಯಲ್ಲಿ ಆಯೋಜಕರು
ದಕ್ಷಿಣ ಕನ್ನಡ ರಂಗಭೂಮಿಯಲ್ಲಿ
ಅದ್ವಿತೀಯ ನಾಟಕ
700ಕ್ಕೂ
ಹೆಚ್ಚು ಪ್ರದರ್ಶನ
ಹಿರಿಯ ಹಾಗೂ ಜನಪ್ರಿಯ
ರಂಗಕರ್ಮಿ ನಟ, ನಿರ್ದೇಶಕ, ಲೇಖಕ, ನಾಟಕ ರಚನೆಕಾರ ವಿಜಯಕುಮಾರ್ ಕೋಡಿಯಾಲಬೈಲು ವಿರಚಿತ ಶಿವದೂತೆ
ಗುಳಿಗ ನಾಟಕವು ಇಂದು ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ. ದಕ್ಷಿಣ
ಕನ್ನಡ ರಂಗಭೂಮಿ ಇತಿಹಾಸದಲ್ಲಿಯೇ ನಿರಂತರವಾಗಿ ಭರ್ಜರಿ ಪ್ರದರ್ಶನ ಕಂಡಿರುವ ಮತ್ತು ಪ್ರದರ್ಶನ ಕಂಡ
ಕೆಲವೆಡೆ 10 ಸಾವಿರದಷ್ಟು ದಾಖಲೆ ಸಂಖ್ಯೆಯ ಪ್ರೇಕ್ಷಕರನ್ನು ಕಂಡ ಅಪರೂಪದ ದಾಖಲೆ ಈ ನಾಟಕ ಹೊಂದಿದ್ದು
ತೀರ್ಥಹಳ್ಳಿಯಲ್ಲೂ ಕೂಡ ಅಂದಾಜು 10 ಸಾವಿರ ಜನ ಪ್ರೇಕ್ಷಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು
ಪ್ರದರ್ಶನದ ಜವಾಬ್ದಾರಿ ಹೊತ್ತ ರಂಗ ಸಿಂಗಾರ ಹೇಳಿದೆ.
ಈಗಾಗಲೇ ರಾಜ್ಯ, ದೇಶ,
ವಿದೇಶಗಳಲ್ಲಿ 700ಕ್ಕೂ ಹೆಚ್ಚು ಪ್ರದರ್ಶನಕಂಡಿದ್ದು ಮುಂದಿನ ಜುಲೈ ತಿಂಗಳ ವರೆಗೆ ಮುಂಗಡ ಬುಕ್ಕಿಂಗ್
ನಾಟಕ ಇದಾಗಿದೆ.
ತೀರ್ಥಹಳ್ಳಿಯಲ್ಲಿ
ಈ ನಾಟಕ ಮಾಜಿ ಸಚಿವ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಜನತೆಗೆ ಅರ್ಪಣೆಗೊಳಿಸಲಿದ್ದು, ರಾಜ್ಯ ಕೆಪಿಸಿಸಿ
ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡ, ಮುಖಂಡರಾದ ಅಮ್ರಪಾಲಿ ಸುರೇಶ್, ಬಾಳೇಬೈಲು ರಾಘವೇಂದ್ರ
ಶೆಟ್ಟಿ, ರತ್ನಾಕರ ಶೆಟ್ಟಿ, ಸುಶೀಲ ಶೆಟ್ಟಿ, ರಹಮತ್ ಉಲ್ಲಾ ಅಸಾದಿ, ಅಮರನಾಥ ಶೆಟ್ಟಿ, ಆದರ್ಶ ಹುಂಚದಕಟ್ಟೆ,
ಪುಟ್ಟೋಡ್ಲು ರಾಘವೇಂದ್ರ, ಕಲಾವಿದರಾದ ಬಿ.ಗಣಪತಿ, ನಿಶ್ಚಲ್ ಜಾದೂಗಾರ್, ಬಸವಾನಿ ಉದಯ್ ಮುಂತಾದವರು
ಸರ್ವರನ್ನು ಸ್ವಾಗತಿಸಿದ್ದಾರೆ. ಚಿಂತಕ ಹಾಗೂ ಲೇಖಕ ಸುಧೀರ್ ಕುಮಾರ್ ಮುರೋಳ್ಳಿ ಶಿವದೂತೆ ಗುಳಿಗ
ನಾಟಕವು ದಕ್ಷಿಣ ಕನ್ನಡದ ದೈವ ಪರಂಪರೆಯ ಮಹತ್ವ ಮತ್ತು ವಿಭಿನ್ನ ಸಂಸ್ಕೃತಿಯನ್ನು ಅತ್ಯಂತ ಮನೋಜ್ಞವಾಗಿ
ಕಟ್ಟಿಕೊಡುತ್ತಿದ್ದು ಆ ಸಂಸ್ಕೃತಿಯ ಸುಂದರ ಪರಿಚಯಕ್ಕಾಗಿ ಈ ನಾಟಕವನ್ನು ಪ್ರತಿಯೊಬ್ಬರು ವೀಕ್ಷಿಸಬೇಕೆಂದು
ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ ಈ ನಾಟಕ ಪ್ರಮುಖ ಪಾತ್ರದಲ್ಲಿ ಕಾಂತಾರ ಗುರುವ ಖ್ಯಾತಿಯ ಸ್ವರಾಜ್ ಶೆಟ್ಟಿ ಅಭಿನಯಿಸಲಿದ್ದಾರೆ. ಸಂಜೆ 6.30ರಿಂದ ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.



