ಫೆಬ್ರವರಿ 20, 21ರಂದು ರಂಜದಕಟ್ಟೆ
ಚಾಮುಂಡೇಶ್ವರಿ ದೇವಸ್ತಾನದಲ್ಲಿ ವಾರ್ಷಿಕ ಹರಕೆ ಮತ್ತು ಕೆಂಡಕೊಂಡ ಸೇವೆ ಕಾರ್ಯಕ್ರಮ.
ತೀರ್ಥಹಳ್ಳಿಯ ರಂಜದಕಟ್ಟೆಯ ಶ್ರೀ
ಚಾಮುಂಡೇಶ್ವರಿ ಶ್ರೀ ಹೊನ್ನತ್ತಮ್ಮ ಶ್ರೀ ಗುಳ್ಳೇಮಾರಿಯಮ್ಮ ದೇವಾಲಯದಲ್ಲಿ ಫೆಬ್ರವರಿ 20ರ ಸೋಮವಾರ
ಮತ್ತು 21ರ ಮಂಗಳವಾರ ರಾತ್ರಿ 9.30ಕ್ಕೆ ವಾರ್ಷಿಕ ಹರಕೆ ಮತ್ತು ಕೆಂಡಕೊಂಡ ಸೇವೆ ಜರುಗಲಿದೆ.
ಈ ಧಾರ್ಮಿಕ ಕಾರ್ಯಕ್ರಮ ಮತ್ತು ಜಾತ್ರೆಯಲ್ಲಿ ಚೋರಡಿ, ಕಾವಾಸಪುರ, ಹೊಸನಗರ, ಹಿರೇಕೌಂಶಿ, ಅಂಜನಾಪುರ, ಶ್ರೀ ಶಿವಶಕ್ತಿ ಚಂಡಿಕೇಶ್ವರಿ ದೇವಸ್ಥಾನ, ಮರಾಠಿ ಕ್ಯಾಂಪ್ ಚೋರಡಿ ಹಾಗೂ ಇನ್ನಿತರ ಕಡೆಗಳಿಂದ ಅಮ್ಮನವರ ಪಲ್ಲಕ್ಕಿ ಆಗಮಿಸಲಿದೆ.
ಫೆಬ್ರವರಿ 21ರ ಮಂಗಳವಾರ 2 ಗಂಟೆಗೆ
ದೇವರುಗಳ ಪಲ್ಲಕ್ಕಿ ದೇವಸ್ಥಾನದಿಂದ ಹೊರಟು ತೀರ್ಥಹಳ್ಳಿಯ ಕ್ಷೇತ್ರ ದೇವತೆ ಶ್ರೀ ರಾಮೇಶ್ವರ ದೇವರ
ಸನ್ನಿಧಿಗೆ ಆಗಮಿಸಿ ಅಲ್ಲಿಂದ ಸಂಜೆ 5 ಗಂಟೆಗೆ ರಾಜಬೀದಿ ಮಾರ್ಗವಾಗಿ ರಥಬೀದಿಯ ಶ್ರೀ ಆಂಜನೇಯ ಸ್ವಾಮಿ
ದೇವಸ್ಥಾನ, ಶ್ರೀ ರಾಘವೇಂದ್ರ ಮಠ, ಶ್ರೀ ಲಕ್ಷೀ ವೆಂಕಟರಮಣ ದೇವಸ್ಥಾನ, ಕಲ್ಲಾರೆ ಗಣಪತಿ ದೇವಸ್ಥಾನ,
ಶ್ರೀ ಮಾರಿಕಾಂಬಾ ದೇವಾಸ್ಥಾನ ಮತ್ತು ಶಿವರಾಜಪುರ ಸಾಲುಕಟ್ಟೆ ಗಣಪತಿ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವ
ತೆರಳಿದ ನಂತರ ಪುನಃ ದೇವಸ್ಥಾನ ಪ್ರವೇಶ ಇರುತ್ತದೆ.
ಬಳಿಕ ರಾತ್ರಿ 9 ಗಂಟಗೆ ಸಂಪ್ರದಾಯದಂತೆ
18 ಅಡಿ ಉದ್ದದ ಕೆಂಡಕೊಂಡ ಸೇವೆಯೂ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ
-9449724914, 8618652630, 9483816297, 9481179490, 9449686584, 8884099752 ಮೊಬೈಲ್
ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.