ರಂಜದಕಟ್ಟೆಯಲ್ಲಿ ಹರಕೆ ಕೆಂಡಕೊಂಡ ಸೇವೆ

 

ಫೆಬ್ರವರಿ 20, 21ರಂದು ರಂಜದಕಟ್ಟೆ ಚಾಮುಂಡೇಶ್ವರಿ ದೇವಸ್ತಾನದಲ್ಲಿ ವಾರ್ಷಿಕ ಹರಕೆ ಮತ್ತು ಕೆಂಡಕೊಂಡ ಸೇವೆ ಕಾರ್ಯಕ್ರಮ.

ತೀರ್ಥಹಳ್ಳಿಯ ರಂಜದಕಟ್ಟೆಯ ಶ್ರೀ ಚಾಮುಂಡೇಶ್ವರಿ ಶ್ರೀ ಹೊನ್ನತ್ತಮ್ಮ ಶ್ರೀ ಗುಳ್ಳೇಮಾರಿಯಮ್ಮ ದೇವಾಲಯದಲ್ಲಿ ಫೆಬ್ರವರಿ 20ರ ಸೋಮವಾರ ಮತ್ತು 21ರ ಮಂಗಳವಾರ ರಾತ್ರಿ 9.30ಕ್ಕೆ ವಾರ್ಷಿಕ ಹರಕೆ ಮತ್ತು ಕೆಂಡಕೊಂಡ ಸೇವೆ ಜರುಗಲಿದೆ.

ಈ ಧಾರ್ಮಿಕ ಕಾರ್ಯಕ್ರಮ ಮತ್ತು ಜಾತ್ರೆಯಲ್ಲಿ ಚೋರಡಿ, ಕಾವಾಸಪುರ, ಹೊಸನಗರ, ಹಿರೇಕೌಂಶಿ, ಅಂಜನಾಪುರ, ಶ್ರೀ ಶಿವಶಕ್ತಿ ಚಂಡಿಕೇಶ್ವರಿ ದೇವಸ್ಥಾನ, ಮರಾಠಿ ಕ್ಯಾಂಪ್‌ ಚೋರಡಿ ಹಾಗೂ ಇನ್ನಿತರ ಕಡೆಗಳಿಂದ ಅಮ್ಮನವರ ಪಲ್ಲಕ್ಕಿ ಆಗಮಿಸಲಿದೆ.

ಫೆಬ್ರವರಿ 21ರ ಮಂಗಳವಾರ 2 ಗಂಟೆಗೆ ದೇವರುಗಳ ಪಲ್ಲಕ್ಕಿ ದೇವಸ್ಥಾನದಿಂದ ಹೊರಟು ತೀರ್ಥಹಳ್ಳಿಯ ಕ್ಷೇತ್ರ ದೇವತೆ ಶ್ರೀ ರಾಮೇಶ್ವರ ದೇವರ ಸನ್ನಿಧಿಗೆ ಆಗಮಿಸಿ ಅಲ್ಲಿಂದ ಸಂಜೆ 5 ಗಂಟೆಗೆ ರಾಜಬೀದಿ ಮಾರ್ಗವಾಗಿ ರಥಬೀದಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀ ರಾಘವೇಂದ್ರ ಮಠ, ಶ್ರೀ ಲಕ್ಷೀ ವೆಂಕಟರಮಣ ದೇವಸ್ಥಾನ, ಕಲ್ಲಾರೆ ಗಣಪತಿ ದೇವಸ್ಥಾನ, ಶ್ರೀ ಮಾರಿಕಾಂಬಾ ದೇವಾಸ್ಥಾನ ಮತ್ತು ಶಿವರಾಜಪುರ ಸಾಲುಕಟ್ಟೆ ಗಣಪತಿ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವ ತೆರಳಿದ ನಂತರ ಪುನಃ ದೇವಸ್ಥಾನ ಪ್ರವೇಶ ಇರುತ್ತದೆ.

ಬಳಿಕ ರಾತ್ರಿ 9 ಗಂಟಗೆ ಸಂಪ್ರದಾಯದಂತೆ 18 ಅಡಿ ಉದ್ದದ ಕೆಂಡಕೊಂಡ ಸೇವೆಯೂ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ -9449724914, 8618652630, 9483816297, 9481179490, 9449686584, 8884099752 ಮೊಬೈಲ್‌ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post