ಕಡಿದಾಳು ದಯಾನಂದರ ಸಾಧನೆಯ ಹೆಜ್ಜೆ ಆಧರಿಸಿದ ಪುಸ್ತಕ
ಕೃಷಿ, ಶೈಕ್ಷಣಿಕ, ಮಾರುಕಟ್ಟೆ, ಸಾಮಾಜಿಕ ಕ್ಷೇತ್ರದಲ್ಲಿ ಕಠಿಣ ಪರಿಶ್ರಮದ ಮೂಲಕ ಕಡಿದಾಳು ದಯಾನಂದ ಸಾಧನೆ ಸ್ಮರಣೀಯ. 75 ವರ್ಷಗಳನ್ನು ಪೂರೈಸುತ್ತಿರುವ ಶುಭ ಸಂದರ್ಭದಲ್ಲಿ ಅವರ ಕುರಿತ ವಿಹಂಗಮದ ಜಂಗಮ ಗೌರವ ಗ್ರಂಥ ಬಿಡುಗಡೆ ಸಮಾರಂಭ ಶನಿವಾರ ಸಂಜೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಲಿದೆ.
ವಿವಿಧ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಯಶಸ್ವಿಗೊಳಿಸಿದ ಸಾಧಕ. ಪಟ್ಟು ಹಿಡಿದು
ತಾನು ತೆಗೆದುಕೊಂಡ ಸವಾಲನ್ನು ಪೂರ್ಣಗೊಳಿಸಿ ನಂಬಿದವರಿಗೆ ಧೈರ್ಯ ತುಂಬುವ ಸ್ವಭಾವ ಅವರದ್ದಾಗಿದೆ.
ಓರ್ವ ಸಾಮಾನ್ಯ ಕೃಷಿಕನಾಗಿ ವಿದೇಶಗಳ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಕೃಷಿ ತಂತ್ರಗಾರಿಕೆಯನ್ನು
ಗ್ರಾಮೀಣ ಪ್ರದೇಶಕ್ಕೆ ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಸಾಕ್ಷಿ ಪ್ರಜ್ಞೆಯಾಗಿ ಉಳಿದಿದ್ದಾರೆ.