ಮಕ್ಕಳಿಗೆ ನಾಯಕತ್ವ ಬೆಳೆಸಲು ಸಹಕಾರಿ -ನಿರಂಜನ್
ತೀರ್ಥಹಳ್ಳಿ ಪಟ್ಟಣದ ಬಿಆರ್ಸಿ ಕೇಂದ್ರದಲ್ಲಿ ಸೇವಾದಳ ತರಬೇತಿ ಪಡೆದ ಶಿಕ್ಷಕರ ಪುನಶ್ಚೇತನ ಕಾರ್ಯಕ್ರಮ ಗುರುವಾರ ನಡೆಯಿತು.
ತಾಲ್ಲೂಕು ದೈಹಿಕ ಪರಿವೀಕ್ಷಕ
ನಿರಂಜನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೇವಾದಳ ಶಿಕ್ಷಣ ಪ್ರತಿಯೊಂದು ಗ್ರಾಮೀಣ ವಿದ್ಯಾರ್ಥಿಗಳಿಗೆ
ತಲುಪಬೇಕು. ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಸೇವಾದಳವನ್ನು ಸ್ಥಾಪಿಸುವ
ಅಗತ್ಯ ಇದೆ. ತೀರ್ಥಹಳ್ಳಿ ತಾಲ್ಲೂಕು ಸಮಿತಿ ಶಿಕ್ಷಕರಿಗಾಗಿ ಉತ್ತಮ ಸಹಾಯಕ ತರಬೇತಿ ಶಿಬಿರ ಆಯೋಜಿಸಬೇಕು
ಎಂದು ಸಲಹೆ ನೀಡಿದರು.
ಸೇವಾದಳ ತಾಲ್ಲೂಕು ಉಪಾಧ್ಯಕ್ಷ ಟಿ.ಕೆ. ರಮೇಶ್
ಶೆಟ್ಟಿ ಮಾತನಾಡಿ, ಸೇವಾದಳ ಸಂಸ್ಥೆಯೂ ಗಾಂಧಿಜೀ ಆಶಯದಂತೆ ಡಾ.ನಾ.ಸು. ಹರ್ಡಿಕರ್ ಸ್ಥಾಪಿಸಿದರು.
ಮಕ್ಕಳಿಗೆ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ ಕರ್ತವ್ಯ ನಿರ್ವಹಿಸಲಿದೆ ಎಂದರು.
ತಾಲ್ಲೂಕು ಅಧ್ಯಕ್ಷ ಕೆಸ್ತೂರು ಮಂಜುನಾಥ್ ಮಾತನಾಡಿ,
ಶಿಕ್ಷಕರಿಗೆ ಬ್ಯಾಂಡ್ ತರಬೇತಿ, ಧ್ವಜಶಿಬಿರ, ಮಕ್ಕಳಿಗೆ ನಾಯಕತ್ವ ತರಬೇತಿ, ತಾಲ್ಲೂಕು ಮಟ್ಟದ ಮಕ್ಕಳ ಮೇಳ ನಡೆಸಿದ್ದೇವೆ. ಫೆಬ್ರವರಿ
ತಿಂಗಳಿನಲ್ಲಿ ಇಲಾಖೆ ಸಹಯೊಗದೊಂದಿಗೆ ಜಿಲ್ಲಾ ಮಟ್ಟದ ಸಹಾಯಕ ತರಬೇತಿ ಶಿಬಿರ ನಡೆಸಲು ತಿರ್ಮಾನಿಸಿದ್ದೇವೆ. ಶಿಕ್ಷಕರು
ಇದರ ಸದುಪಯೊಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪೂರ್ಣೆಶ್ ಕೆಳಕೆರೆ ಸ್ವಾಗತಿಸಿದರು. ಜಿಲ್ಲಾ ಸಂಘಟಕ ಪಸನ್ನ ಕುಮಾರ್ ಹೆಚ್.ಸಿ ಪ್ರಾಸ್ತವಿಸಿದರು. ಸದಸ್ಯರಾದ ಚಿತ್ರಾ ವಂದಿಸಿದರು. ಶಿಕ್ಷಣ ಸಂಯೊಜಕ ನಾಗರಾಜ್, ಸದಸ್ಯ ಸಂತೋಷ್ ಮುಂತಾದವರು ಇದ್ದರು.