ಸಿಕ್ಕಿತೇ ಕಿಮ್ಮನೆಗೆ
ಹೊಸ ಅಸ್ತ್ರ
ಗುಜರಾತಿನಲ್ಲಿ ಗೃಹಸಚಿವ
ಆರಗ ಮತ್ತು ಪಿಂಪ್ ಸ್ಯಾಂಟ್ರೋ ರವಿ
ಏನಿದರ ಗುಟ್ಟು, ದುಡ್ಡಿನ
ಖರಾಮತ್ತು…?
ರಾಜ್ಯದಲ್ಲಿ ತೀವ್ರ ಸುದ್ದಿಗೆ ಗ್ರಾಸವಾಗಿರುವ, ಅನೈತಿಕ ದಂಧೆ ಹಾಗೂ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸ್ಯಾಂಟ್ರೋ ರವಿ ಅಲಿಯಾಸ್ ಕೆ.ಎಸ್. ಮಂಜುನಾಥ್ನನ್ನು ಪೊಲೀಸರು ಕೊನೆಗೂ ಶುಕ್ರವಾರ ಗುಜರಾತ್ನಲ್ಲಿ ಬಂಧಿಸಿದ್ದಾರೆ. ಕರ್ನಾಟಕದಲ್ಲಿ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಗೃಹಸಚಿವ ಆರಗ ಜ್ಞಾನೇಂದ್ರ ಗುಜರಾತ್ ರಾಜ್ಯಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಿ ಹಿಂದಿರುಗಿದ ಬೆನ್ನಲ್ಲೆ ಸ್ಯಾಂಟ್ರೋ ರವಿ ಕೂಡ ಗುಜರಾತ್ನಲ್ಲಿ ಪೊಲೀಸರಿಗೆ ಸಿಕ್ಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಳೆದ 11 ದಿನಗಳಿಂದ
ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಗಾಗಿ ಬಲೆ ಬೀಸಿದ ಮೈಸೂರು ಪೊಲೀಸರು ಶನಿವಾರ ಗುಜರಾತ್ನಲ್ಲಿ ಬಂಧಿಸಿದ್ದಾರೆ. ಸ್ವಂತ ಫೋನನ್ನು ಬಳಸದೇ
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಸ್ಯಾಂಟ್ರೋ ರವಿಯ ಚಲನವಲನ ಪತ್ತೆ ಮಾಡಲು ಪೊಲೀಸರು
ಸೈಬರ್ ತಾಂತ್ರಿಕ ನೆರವು ಪಡೆದುಕೊಂಡಿದ್ದು, ಅಂತಿಮವಾಗಿ ಗುಜರಾತ್ನಲ್ಲಿ ಇದ್ದಾನೆ ಎಂಬ ಸುಳಿವು ಸಿಕ್ಕ ಕೂಡಲೇ ಪೊಲೀಸರ
ವಿಶೇಷ ತಂಡ ಆತನನ್ನು
ಬಂಧನ ಮಾಡಿದೆ. ಗುಜರಾತ್ ಸ್ಥಳೀಯ ನ್ಯಾಯಾಲಯದಿಂದ ಸ್ಥಳಾಂತರ ವಾರಂಟ್ (Transit Warrant) ಲಭ್ಯವಾದ ನಂತರ ಆತನನ್ನು ರಾಜ್ಯಕ್ಕೆ
ಕರೆತರಲಾಗುತ್ತದೆ.
ಕಳೆದ ವರ್ಷ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ
ಸ್ಯಾಂಟ್ರೋ ರವಿ ಆಲಿಯಾಸ್ ಕೆ.ಎಸ್ ಮಂಜುನಾಥ್ ವಿರುದ್ಧ ದೂರು ದಾಖಲಾಗಿದ್ದ ಸಂದರ್ಭದಲ್ಲಿ ಆತ
ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿರುವುದಾಗಿ ಮತ್ತು ತಾನು ವರ್ಗಾವಣೆ
ಮಾಡಿಸಿಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಅಲ್ಲದೆ ಸಿಎಂ ಮಗನ ಜೊತೆಗಿನ
ಸ್ಯಾಂಟ್ರೋ ರವಿ ನಡೆಸಿರುವ ವಾಟ್ಸಾಪ್ ಸಂದೇಶ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೈಸೂರಿನಲ್ಲಿ ಸ್ಯಾಂಟ್ರೊ ರವಿ ಹೆಂಡತಿ ನೀಡಿರುವ ಪ್ರಕರಣ ಆಧರಿಸಿ ಬಂಧಿಸಲಾಗಿದೆ. 2019ರಲ್ಲಿ
ಜಾಹೀರಾತು ಆಧರಿಸಿ ಸ್ಯಾಂಟ್ರೋ ರವಿ ನಡೆಸಿದ ಇಂಟರ್ವ್ಯೂ ಮಧ್ಯೆ ಆಕೆಗೆ ಡ್ರಗ್ಸ್ ನೀಡಿ ಬಲಾತ್ಕಾರ
ಮಾಡಿದ್ದ. ನಂತರ ಒತ್ತಾಯ ಪೂರ್ವಕವಾಗಿ ಆಕೆಯನ್ನು ಮದುವೆಯಾಗಿದ್ದ. ಸ್ಯಾಂಟ್ರೋ ರವಿಯಿಂದ ತಪ್ಪಿಸಿಕೊಳ್ಳಲು
ಪ್ರಯತ್ನಿಸುತ್ತಿದ್ದ ಆಕೆಯ ಮೇಲೆ 2022ರಲ್ಲಿ ಸುಳ್ಳು ಡರೋಡೆ ಪ್ರಕರಣವನ್ನು ಬೆಂಗಳೂರಿನ ಕಾಟನ್ಪೇಟೆ
ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಬಂಧನಕ್ಕೆ ಕಾರಣವಾಗಿದ್ದ. ಆಂತರಿಕ ತನಿಖೆಯಲ್ಲಿ ನಡೆಸಿದ ನಂತರ
ಅಂದಿನ ಠಾಣಾಧಿಕಾರಿ ಪ್ರವೀಣ್ ಕೆ.ವಿ ಅವರನ್ನು ಅಮಾನತ್ತು ಮಾಡಲಾಗಿತ್ತು.