5 ವರ್ಷದ ಪ್ರೀತಮ್ ಸಾವು
ಪೋಷಕರೇ ಎಚ್ಚರ… ಜಾಗ್ರತೆ…
ಚಾಕಲೇಟ್ ಎಂದು ಭಾವಿಸಿ ಮನೆಯಲ್ಲಿ ಇಲಿಗಳ ಸಾಯಿಸಲು ಇಟ್ಟಿದ್ದ ಇಲಿಪಾಶಾಣ ಸೇವಿಸಿ ಪ್ರೀತಮ್ (5) ಮೃತಪಟ್ಟ ಘಟನೆ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನಕೊಪ್ಪದಲ್ಲಿ
ಶನಿವಾರ ನಡೆದಿದೆ. ಬಾಲಕ ಚಂದ್ರಪ್ಪ, ಗೀತಾ ದಂಪತಿ
ಪುತ್ರನಾಗಿದ್ದು ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಅಂಗನವಾಡಿಗೆ ತೆರಳುತ್ತಿದ್ದ ಬಾಲಕ ಶುಕ್ರವಾರ ಸಂಜೆ ಇಲಿಪಾಶಾಣ ಸೇವಿಸಿ
ಮಲಗಿದ್ದ. ರಾತ್ರಿ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆ ಪೋಷಕರು ಗಲಿಬಿಲಿಗೊಂಡು ಆಸ್ಪತ್ರೆಗೆ
ದಾಖಲಿಸಲು ಪ್ರಯತ್ನಿಸಿದ್ದರು. ಅಷ್ಟರಲ್ಲಾಗಲೇ ಬಾಲಕ ಅಸುನೀಗಿದ್ದ. ಘಟನೆಯ ಸಂಬಂಧ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.