ರಾತ್ರೋ ರಾತ್ರೋ ತೀರ್ಥಹಳ್ಳಿ ಪೇಟೆಗೆ ಎಂಟ್ರಿಕೊಟ್ಟ ಕಾಡಾನೆ
ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ
ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿಯ ತುಂಗಾ ನದಿಯಲ್ಲಿ ಶನಿವಾರ ಬೆಳಗ್ಗಿನಜಾವ ಕಾಡಾನೆಯೊಂದು ಎಂಟ್ರಿ ಕೊಟ್ಟಿದ್ದು ಬೆಳಗ್ಗಿನ ಜಾವ ಭಯದ ವಾತಾವರಣ ಸೃಷ್ಟಿಯಾಗಿದೆ. ರಾತ್ರಿಯ ವೇಳೆ ಮೇಳಿಗೆ ಗ್ರಾಮದ ಕೆಳೆಕೆರೆಯಲ್ಲಿ 10 ಗಂಟೆಗೆ ಕಾಣಿಸಿಕೊಂಡಿದೆ. 4 ರಿಂದ 5 ವರ್ಷದ ಆನೆ ಇದಾದ್ದು ಎನ್ ಆರ್ ಪುರದಿಂದ ಬದಿರಬಹುದು ಎಂದು ಅರಣ್ಯ ಇಲಾಖೆ ಅನುಮಾನ ವ್ಯಕ್ತಪಡಿಸಿದೆ. ಕುರುವಳ್ಳಿಯ ನಾಗರಕಟ್ಟೆ ಸಮೀಪ ತುಂಗಾ ನದಿಗೆ ಇಳಿದಿದ್ದು ಬೆಳಕು ಬಿಡದ ಕಾರಣ ಇನ್ನೂ ಕೂಡ ಕಣ್ಣಿಗೆ ಕಾಣಿಸಿಕೊಂಡಿಲ್ಲ.