ತೀರ್ಥಹಳ್ಳಿಯಲ್ಲಿ ಬಾಲು ಡಾಕ್ಟರ್ ಎಂದೇ ಜನಪ್ರಿಯರಾಗಿದ್ದ ಡಾಕ್ಟರ್ ಶ್ರೀನಿವಾಸ್ ಮೂರ್ತಿ ಶಿವಮೊಗ್ಗದ ಪುತ್ರನ ಮನೆಯಲ್ಲಿ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
1960-80ರ ದಶಕದ ಅಂತ್ಯದ ವರೆಗೂ ತೀರ್ಥಹಳ್ಳಿಯ ಜನಸಾಮಾನ್ಯರ ವೈದ್ಯರಾಗಿದ್ದ ಅವರು ಸದಾ ಕಾಲ ಹಸನ್ಮುಖಿಯಾಗಿ ಚಿಕಿತ್ಸೆ ನೀಡುತ್ತಿದ್ದರು. ನರ್ಸಿಂಗ್ ಹೋಂಗಳು ಆರಂಭಗೊಂಡಾಗಲು ಅವರ ಜನಪ್ರಿಯತೆ ಕಡಿಮೆಯಾಗಿರಲಿಲ್ಲ. ಅವರು ಶೆಟ್ಟಿ ಡಾಕ್ಟರ್, ಡಾ. ದಿನಮಣಿಯವರ ಸಮಕಾಲಿನರಾಗಿದ್ದವರು. ಈ ಮೂವರು ಒಂದು ಕಾಲದಲ್ಲಿ ತೀರ್ಥಹಳ್ಳಿ ಜನಸಾಮಾನ್ಯರ ಪಾಲಿನ ಅಪತ್ಬಾಂದವರಾಗಿದ್ದರು. ಬಾಲು ಡಾಕ್ಟರ್ ಅನಿವಾರ್ಯ ಸಂದರ್ಭಗಳಲ್ಲಿ ಚಿಕಿತ್ಸೆ ನೀಡಲು ಮನೆಗಳಿಗೂ ತೆರಳುತ್ತಿದ್ದರು. ಅಪಾರ ವೃತ್ತಿ ನಿಷ್ಠೆ ಹೊಂದಿದ್ದ 80 ರ ಹರೆಯದ ಗಡಿ ದಾಟಿ ತುಂಬು ಜೀವನ ನಡೆಸಿ ಇಹದ ಯಾತ್ರೆ ಮುಗಿಸಿದ್ದಾರೆ. ಇವರ ನಿಧನದಿಂದ ತೀರ್ಥಹಳ್ಳಿಯ ಜನಪ್ರಿಯ ಹಾಗೂ ಘನತೆಯಿಂದ ತಮ್ಮ ವೃತ್ತಿಯನ್ನು ನಿರ್ವಹಿಸಿದ ವೈದ್ಯರೊಬ್ಬರು ಕಣ್ಮರೆಯಾದಂತಾಗಿದೆ. ಮೃತರು ಇಬ್ಬರು ಪುತ್ರ, ಓರ್ವ ಪುತ್ರಿಯರನ್ನು ಅಗಲಿದ್ದಾರೆ.