ವಿಶ್ವಮಾನವ ಜ್ಯೋತಿಯೊಂದಿಗೆ ಗೋಪಾಲಗೌಡ ರಂಗಮಂದಿರ ಮುತ್ತಿಗೆ
ಕಪ್ಪು ಬಾವುಟ ಪ್ರದರ್ಶನಕ್ಕೆ ಸಿದ್ಧತೆ
ಜಗದ ಕವಿ, ಯುಗದ ಕವಿ, ಆಧುನಿಕ ಚಿಂತನೆಗಳಿಂದ ಮನುಷ್ಯ ಜಗತ್ತಿನ ತಲ್ಲಣಗಳಿಗೆ ಧ್ವನಿಯಾದಂತಹ ರಾಷ್ಟ್ರಕವಿ ಕುವೆಂಪು ಚಿಂತನೆಗಳಿಗೆ ವಿರೋಧ ವ್ಯಕ್ತಪಡಿಸುವ ಮನಸ್ಥಿತಿಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಪ್ರಜ್ಞಾವಂತರ ನಾಡೆನಿಸಿಕೊಂಡ ತೀರ್ಥಹಳ್ಳಿಯಲ್ಲೇ ವಿಷ ಬಿತ್ತನೆ ಮಾಡುವವರನ್ನು ಸಹಿಸಲು ಸಾಧ್ಯವಿಲ್ಲ.
ವಕ್ರ ಮನಸ್ಥಿತಿಯ ತೀರ್ಥ ಸಂಪ್ರೋಕ್ಷಣೆ ಮಾಡುವ ನಯವಂಚಕತನ ಹೆಚ್ಚು ದಿನ ನಡೆಯುವುದಿಲ್ಲ. ಅಸ್ಥಿತ್ವಕ್ಕಾಗಿ ಕೊಸರಾಡುತ್ತಿರುವ ಲಜ್ಜೆಗೇಡಿಗಳು ರಾಷ್ಟ್ರೀಯತೆ ಪಾಠ ಮಾಡುವ ಅರ್ಹತೆ ಹೊಂದಿಲ್ಲ. ಮಂಕುಬೂದಿ ಎರಚುವ ನಿಮಗೆ ಒಲೆಯ ಬೂದಿ ಎರಚುತ್ತೇವೆ ಎಂದು ವಿಶ್ವಮಾನವ ಜ್ಯೋತಿ "ಕುಪ್ಪಳ್ಳಿಯಿಂದ ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನಕ್ಕೆ" ತಲುಪಿಸಿದ ಹೋರಾಟದ ನೇತ್ರತ್ವ ವಹಿಸಿದನೆಂಪೆ ದೇವರಾಜ್ ,ನಿಶ್ವಲ್ ಜಾದೂಗಾರ್ , ಹೂನ್ನಾನಿ ದೇವರಾಜ್, ತಿರುಪತಿ ಮಂಜು,ಪೂರ್ಣೇಶ್ ತಿಳಿಸಿದ್ದಾರೆ.
ಪ್ರತಿಭಟನೆಗೆ ರಾಜ್ಯಾದ್ಯಂತ ಬೆಂಬಲ ದೊರೆತಿದ್ದು ಹಲವರು ಬುಧವಾರ ತೀರ್ಥಹಳ್ಳಿಗೆ ಆಗಮಿಸುವುದಾಗಿ ತಿಳಿಸಿದ್ದಾರೆ.