ಗೃಹಸಚಿವರ ಕ್ಷೇತ್ರದಲ್ಲಿ ಇದೇನಿದು ಪಜೀತಿ

 ಮಹಿಳಾ ಪೊಲೀಸ್  ಸಿಬ್ಬಂದಿಗಳಿಗೆ ವಸತಿ  ಅವ್ಯವಸ್ಥೆ 
 ಎಳ್ಳಮಾವಾಸ್ಯೆ ಜಾತ್ರೆಯ   ಭದ್ರತೆಗೆ ಆಗಮಿಸಿದ   ಸಿಬ್ಬಂದಿಗಳ ಪೇಚಾಟ 


ಸಾಂದರ್ಭಿಕ ಚಿತ್ರ
ತೀರ್ಥಹಳ್ಳಿಯ ಅದ್ದೂರಿ ಎಳ್ಳಮಾವಾಸ್ಯೆ ಜಾತ್ರೆ ಆರಂಭವಾಗಿದ್ದು ಮೂರು ದಿನಗಳ ವೈಭವ ಶುಕ್ರವಾರ ಬೆಳಗ್ಗಿನ ತೀರ್ಥಸ್ನಾನದಿಂದ ಆರಂಭಗೊಳ್ಳಲಿದೆ. ಸುಮಾರು 13 ಲಕ್ಷ ಬಜೆಟ್ ಅಲ್ಲಿ ಎಳ್ಳಮಾವಾಸ್ಯೆ ಸಂಭ್ರಮ ಕಳೆಗಟ್ಟಿದೆ. ಈ ನಡುವೆ ತೀರ್ಥಹಳ್ಳಿಯ ಜಾತ್ರೆಯ ಭದ್ರತೆಗೆ ಆಗಮಿಸಿರುವ ಜಿಲ್ಲೆಯ ವಿವಿಧ ತಾಲ್ಲೂಕಿನ ಪೊಲೀಸ್ ಸಿಬ್ಬಂದಿ ಹಾಗೂ ಕೆಎಸ್ಆರ್ ಪಿ ಸಿಬಂದಿಗಳಿಗೆ ವಸತಿ ಸೌಕರ್ಯ ಇಲ್ಲದಿರುವುದು ಗೊಂದಲದ ವಾತಾವರಣ ನಿರ್ಮಿಸಿದೆ.
ಪುರುಷ ಸಿಬ್ಬಂದಿಗಳು ಸ್ನೇಹಿತರು, ಕೆಎಸ್ಆರ್ ಪಿ ವಾಹನದಲ್ಲಿ ಮೂರು ದಿನಗಳು ಆರಾಮಾಗಿ ನಿದ್ರಿಸಬಹುದು. ಆದರೆ ಮಹಿಳಾ ಸಿಬ್ಬಂದಿಗಳಿಗೆ ಈ ಅವ್ಯವಸ್ಥೆ ಇರುಸು ಮುರುಸಿಗೆ ಕಾರಣವಾಗಿದೆ. ಗುರುವಾರ ಸಂಜೆ ತೀರ್ಥಹಳ್ಳಿ ಪಟ್ಟಣದ ರಥಬೀದಿಗೆ ಬಂದಿಳಿದಿರುವ ಸಿಬ್ಬಂದಿಗಳ ಲಗೇಜ್ ಇಡಲು ಕೂಡ ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರದ ಭದ್ರತೆಗಾಗಿ ಬಂದಿರುವ ಮಹಿಳಾ ಸಿಬ್ಬಂದಿಗಳಿಗೆ ಅಭದ್ರತೆ ನಿರ್ಮಾಣವಾದಂತಿದೆ.
ಗೃಹಸಚಿವ ಆರಗ ಜ್ಞಾನೇಂದ್ರರ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲೇ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಭದ್ರತೆ ಇಲ್ಲದಂತಾಗಿದೆ. ಸಚಿವರ ಸ್ವಕ್ಷೇತ್ರದಲ್ಲೇ ಇಂತಹ ಘಟನೆ ನಡೆದಿದ್ದು ಸಿಬ್ಬಂದಿಗಳು ತಮ್ಮೊಳಗೆ ನೊಂದು ಬೆಂದ ಘಟನೆ ಗುರುವಾರ ರಾತ್ರಿ ನಡೆದಿದೆ. ಇದೇನಿದು ವ್ಯವಸ್ಥೆ? ಪೊಲೀಸ್ ಠಾಣೆಯೇ ಗತಿಯಾ? ಕೆಎಸ್ಆರ್ ಪಿ ವಾಹನ ಏರಬೇಕು? ಎಲ್ಲಿಗೆ ಹೋಗುವ? ನಮ್ಮ ಪರಿಸ್ಥಿತಿ ಹೀಗೇಕೆ ಎಂಬ ಗೊಂದಲ ಸಿಬ್ಬಂದಿಗಳ ನಡುವೆಯೇ ಎದ್ದು ತೋರುತ್ತಿತ್ತು. ಭದ್ರತೆ ನೀಡುವವರ ಮೇಲೆ ಜಾತ್ರಾ ಸಮಿತಿ ನಿರ್ಲಕ್ಷ್ಯ ವಹಿಸಬಾರದು. ಮಾನವೀಯ ನೆಲೆಗಟ್ಟಿನಲ್ಲೂ ಸಿಬ್ಬಂದಿಗಳನ್ನು ನೋಡಬೇಕು ಎಂಬ ಗಂಭೀರ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post