ಹಣಗೆರೆಕಟ್ಟೆಯಲ್ಲಿ ಕೈಕಟ್ಟಿ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ
ಸಿಸಿಟಿವಿ ಕ್ಯಾಮರಾದಲ್ಲಿ ಘಟನೆ ದೃಶ್ಯ ಸೆರೆ..?
ಪ್ರಕರಣ ನಡೆದು ವಾರ ಕಳೆದರು ಸಿಗದ ಆರೋಪಿಗಳು
ಸಾಕ್ಷಿ ನಾಶದ ಆರೋಪ ಪೊಲೀಸರ ಸುತ್ತಮುಂಗೀಸರ ಓಂಕಾರ
ಓರ್ವ ವ್ಯಕ್ತಿಗೆ ಸುಮಾರು 20 ರಿಂದ 30 ಜನರ ಗುಂಪೊಂದು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ ಘಟನೆಯೊಂದು
ಹಣಗೆರೆಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮುಂಗೀಸರ ಓಂಕಾರ (35) ಎಂಬ ಯುವಕನ ಮೇಲೆ ಗ್ರಾಮದ ಗುಂಪೊಂದು ತೀವ್ರ ಹಲ್ಲೆ ನಡೆಸಿದೆ. ಥಳಿತದಿಂದಾಗಿ ಗಂಭೀರ ಗಾಯಗೊಂಡ ಓಂಕಾರ
ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೆಸಿ ಆಸ್ಪತ್ರೆಯಲ್ಲಿ ಹೆಚ್ಎಂಆರ್. ವರದಿ
ನೀಡಲಾಗಿದ್ದು ಮಾಳೂರು ಪೊಲೀಸ್
ಠಾಣೆಗೆ ದೂರು ನೀಡಿದ್ದಾರೆ.
ಅಲ್ಲದೇ ಘಟನೆ ಸ್ಥಳದಲ್ಲಿ ಖಾಸಗಿ
ವ್ಯಕ್ತಿಯೊಬ್ಬರ ಸಿಸಿಟಿವಿ ಕ್ಯಾಮರದಲ್ಲಿ ಘಟನೆಯ ಪೂರ್ಣ ಚಿತ್ರಣ ದಾಖಲಾಗಿದೆ ಎಂದು
ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು
ಪ್ರಕರಣಕ್ಕೆ ಸಾಕ್ಷಿಯಾಗಿರುವ ಸಿಸಿಟಿವಿ ದೃಶ್ಯವನ್ನು ನಾಶ ಮಾಡಿದವರು ಯಾರೆಂಬ ಪ್ರಶ್ನೆ ಎದುರಾಗಿದೆ.
ಈ ಬಗ್ಗೆ ಅನುಮಾನದ ಸುಳಿ ಪೊಲೀಸರ ಕಡೆಗೆ ಹರಿದಾಡುತ್ತಿದೆ.
ಪ್ರಕರಣ ಪೊಲೀಸರ ವಿರುದ್ದ ತಿರುಗುವ
ಮೊದಲು ಗೃಹಸಚಿವ ಆರಗ ಜ್ಞಾನೇಂದ್ರ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಎಚ್ಚರವಹಿಸಬೇಕಾಗಿದೆ. ಗೃಹಸಚಿವರ ಕ್ಷೇತ್ರದಲ್ಲಿ ನಿರಂತರವಾಗಿ
ಕ್ರಿಮಿನಲ್ ಪ್ರಕರಣ ಹೆಚ್ಚಾಗುತ್ತಿದ್ದು ರಾಜಕೀಯವಾಗಿಯೂ ಸಚಿವರಿಗೆ ಇರಿಸುಮುರಿಸಿಗೆ ಕಾರಣವಾಗಿದ್ದು ಹಣಗೆರೆ ಘಟನೆ ಕ್ಷೇತ್ರದ ಘನತೆಗೆ ಅಗೌರವ ತಂದಂತಿದೆ.