ಅರಾಜಕತೆ ಪ್ರಶ್ನಿಸಲು ಹೊರಟ ಮುಖಂಡರು ಪೊಲೀಸರ ವಶಕ್ಕೆ
ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಕೀಗಡಿ ಕೃಷ್ಣಮೂರ್ತಿ, ಹಾರೋಗೊಳಿಗೆ ವಿಶ್ವನಾಥ್ ವಶ
ಪ್ರಜಾಪ್ರಭುತ್ವದ ಆಶಯದಂತೆ ಜನಸಾಮಾನ್ಯರು ಮುಖ್ಯಮಂತ್ರಿ ಪ್ರಶ್ನಿಸುವ ಹಕ್ಕನ್ನು ಹೊಂದಿದ್ದಾರೆ. ಪ್ರಶ್ನೆ ಮಾಡುವುದನ್ನೇ ಸಂವಿಧಾನ ವಿರೋಧಿ, ಭದ್ರತೆಯ ವೈಫಲ್ಯ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ತೀರ್ಥಹಳ್ಳಿಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಮೇಲುಗೈ ಸಾಧಿಸುತ್ತಿದ್ದು ವಿವಿಧ ಬೇಡಿಕೆ ಮುಂದಿಟ್ಟಿದ್ದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಕೀಗಡಿ ಕೃಷ್ಣಮೂರ್ತಿ ಮತ್ತು ಹಾರೋಗೊಳಿಗೆ ವಿಶ್ವನಾಥ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿವಿಧ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದೆ ವಿವಿಧ ಬೇಡಿಕೆ ಸಲ್ಲಿಸಿ ಪರಿಹರಕ್ಕೆ ಆಗ್ರಹಿಸಿದ್ದರು. ಬೇಡಿಕೆ ಇಡೇರದಿದ್ದರೆ ಮುಖ್ಯಮಂತ್ರಿಗಳಿಗೆ ಕಪ್ಟು ಭಾವುಟ ಪ್ರದರ್ಶನ ಮಾಡುತ್ತೇವೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದರು. ಭಾನುವಾರ ಮುಖ್ಯಮಂತ್ರಿಗಳು ಆಗಮಿಸುವ ಮೊದಲೇ ಇಬ್ಬರು ದಲಿತ ಮುಖಂಡರನ್ನು ಪೊಲೀಸರು ಮುಂಜಾನೆ ವಶಕ್ಕೆ ಪಡೆದಿದ್ದಾರೆ.
ಸಾರ್ವಜನಿಕ ಕೆಲಸಗಳಿಗೆ ಅಧಿಕಾರಿಗಳು ವಿಪರೀತ ಲಂಚ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆ ಹದಗೆಟ್ಟಿದ್ದು ಮುಖ್ಯಮಂತ್ರಿಗಳು ಇದನ್ನು ಸರಿಪಡಿಸಬೇಕು ಎಂಬ ಭರವಸೆ ಹೊಂದಿದ್ದರು. ಬಗರ್ ಹುಕುಂ ಸಾಗುವಳಿ ಜಮೀನಿಗೆ ದಾಖಲೆ ಒದಗಿಸುವುದು, ವಿವಿಧ ಯೋಜನೆಗಳಡಿ ಅಕ್ರಮ, ಸಕ್ರಮ 94ಸಿ, 94ಸಿಸಿ ಹಕ್ಕುಪತ್ರ ಹಂಚಿಕೆಯಾಗುತ್ತಿದ್ದು ಗೃಹಪಯೋಗಿ ಅಡಮಾನ ಸಾಲ ದೊರೆಯುತ್ತಿಲ್ಲ. ಅಂತಹ ಹಕ್ಕುಪತ್ರ ಕೊಟ್ಟು ಪ್ರಯೋಜನವೇನು. ಆಡಳಿತ ಇಂತಹ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳ ಮುಂದೆ ತಮ್ಮ ಬೇಡಿಕೆ ಸಲ್ಲಿಸಲು ಅವಕಾಶ ಕೇಳಿದ್ದರು.