ಸೋಲಿಸಲು ವ್ಯವಸ್ಥಿತ
ಪ್ರಯತ್ನ ನಡೆಸಿದರೂ ಎದುರಾಳಿಗೆ ಮುಖಭಂಗ
ಸಹಕಾರಿ ರಂಗವನ್ನು
ಪಕ್ಷಾತೀತವಾಗಿ ಮುನ್ನಡೆಸಿದ ಗೌಡರನ್ನು ಬಿಟ್ಟುಕೊಡದ ಮತದಾರರು
ಇದರೊಂದಿಗೆ ಶಿವಮೊಗ್ಗ
ಡಿಸಿಸಿ ಬ್ಯಾಂಕ್ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಸಹಕಾರಿ ರಂಗದಲ್ಲಿ ಅಚ್ಚಳಿಯದೆ
ಚಾಪು ಮೂಡಿಸಿರುವ ಡಾ.ಆರ್.ಎಂ. ಮಂಜುನಾಥ ಗೌಡರನ್ನು ವ್ಯವಸ್ಥಿತ ಷಡ್ಯಂತ್ರದ ಮೂಲಕ ಸಹಕಾರಿ ರಂಗದಿಂದ
ತೆರೆಮರೆಗೆ ಸರಿಸುವ ಅವರ ವಿರೋಧಿಗಳ ಪ್ರಯತ್ನಕ್ಕೆ ಹಿನ್ನಡೆಯಾಗಿದೆ ಎಂಬ ಮಾತು ಕೇಳಿ ಬಂದಿದೆ.
ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಶಾಖೆಯೊಂದರಲ್ಲಿ ನಡೆದಿದೆ ಎನ್ನಲಾದ ನಕಲಿ ಬಂಗಾರದ ಹಗರಣದಲ್ಲಿ ಆಗ ಅಧ್ಯಕ್ಷರಾಗಿದ್ದ ಮಂಜುನಾಥ ಗೌಡರೇ ಸ್ವತಃ ಹಗರಣಕ್ಕೆ ಸಂಬಂಧ ಪಟ್ಟವರ ವಿರುದ್ಧ ದೂರು ನೀಡಿದ್ದಾಗಿಯೂ ರಾಜಕೀಯ ಒತ್ತಡಗಳ ಕಾರಣ ಅವರನ್ನೇ ಹಗರಣದಲ್ಲಿ ಸಿಲುಕಿಸಲಾಗಿದೆ ಎಂಬ ಅಭಿಪ್ರಾಯ ಸಹಕಾರಿ ವಲಯದಲ್ಲಿ ಕೇಳಿ ಬಂದಿತ್ತು. ಮುಂದೆ ಇದರಲ್ಲಿ ಹುರುಳಿಲ್ಲ ಎಂಬ ತೀರ್ಪು ಬಂದಾಗಲೂ ಪಟ್ಟು ಬಿಡದ ಎದುರಾಳಿಗಳು ಅವರನ್ನು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನದಿಂದ ಕೆಳಗಿಳಿಸಿ ರಾಜಕೀಯವಾಗಿ ಅವರನ್ನು ಮುಗಿಸಿದೆವು ಎಂದು ಅಂದುಕೊಂಡಿದ್ದರು.
ಆದರೆ ಇದರ ವಿರುದ್ಧ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದ ಮಂಜುನಾಥ ಗೌಡ ಪುನಃ ಅವಕಾಶ ಪಡೆದು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕೋರ್ಟ್ ನಿರ್ದೇಶನದಂತೆ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ವಿಶೇಷವೆಂದರೇ ಎರಡರಲ್ಲೂ ಅವರು ಭಾರೀ ಮತಗಳನ್ನು ಪಡೆದಿದ್ದಾರೆ. ಚುನಾವಣೆಯಲ್ಲಿ ಪಾಲ್ಗೊಂಡ ಕೆಲವು ಮತದಾರರ ಪ್ರಕಾರ ಅವರ ವಿರುದ್ಧ ಶಿವಮೊಗ್ಗದ ಬಿಜೆಪಿಯ ಬಹುತೇಕ ಹೆಸರಾಂತ ನಾಯಕರು ಎಲ್ಲಾ ರೀತಿಯ ಪ್ರಯತ್ನದ ಮೂಲಕ ಸೋಲಿಸಲು ಪ್ರಯತ್ನಿಸಿದ್ದರು. ಹಣದ ಹೊಳೆಯೇ ಹರಿದಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಆದರೆ ಎಲ್ಲವನ್ನು ಮೀರಿ ಗೆಲ್ಲುವ ಮೂಲಕ ಮಂಜುನಾಥ ಗೌಡ ಶಿವಮೊಗ್ಗ ಜಿಲ್ಲಾ ಸಹಕಾರಿ ಕ್ಷೇತ್ರದಲ್ಲಿ ತಮ್ಮ ಪ್ರಭಾವ ಏನೆಂಬುದನ್ನು ಸಾಬೀತು ಪಡಿಸಿದ್ದಾರೆ.