ಬಿಜೆಪಿ ಮುಖಂಡರಿಗೆ ಕಾನೂನು ಬಾಹಿರ ಗುತ್ತಿಗೆ ಆರೋಪ
ಕಾನೂನು ಪ್ರಕಾರ ಲೀಸ್ ಮಾಡಿಕೊಡಲು ಆಗ್ರಹ
ಕಿಮ್ಮನೆ ಪಟ್ಟು, ಆಡಳಿತಕ್ಕೆ ಇಕ್ಕಟ್ಟು….!
ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿ ಸರ್ವೆ ನಂಬರ್ 72 ರಲ್ಲಿ ಅಕ್ಟೋಬರ್
12ರ ರಾತ್ರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಟ್ರಂಚ್ ಹೊಡೆದಿರುವುದು ವಿವಾದಕ್ಕೆ
ಕಾರಣವಾಗಿದೆ. ಹಗಲಿನಲ್ಲಿ ಸರ್ಕಾರಿ ಕೆಲಸ ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ರಾತ್ರಿಯ ವೇಳೆ ಬಿಜೆಪಿ
ಮುಖಂಡರು, ಆರಗ ಜ್ಞಾನೇಂದ್ರರ ಪರವಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ
ಮೂಲಕ ಕಾರ್ಮಿಕರನ್ನು ಶೋಷಣೆಗೆ ಗುರಿಪಡಿಸಿದ್ದಾರೆ ಎಂದು ಉಪವಾಸ ನಿರತರು ಆರೋಪಿಸಿದರು.
ಮೇಲಿನಕುರುವಳ್ಳಿ, ಕುರುವಳ್ಳಿಯ 8 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ
ನಡೆದುಕೊಂಡು ಬಂದಿದೆ. ಲೀಸ್ ಅವಧಿ ಮುಕ್ತಾಯವಾಗಿ ಟೆಂಡರ್ ಪ್ರಕ್ರಿಯೆ ನಡೆದಿದ್ದರು ತಮ್ಮ ಕಾರ್ಯಕರ್ತರಿಗೆ
ಸಿಗಲಿಲ್ಲ ಎಂಬ ಕಾರಣದಿಂದ ಆ ಪ್ರಕ್ರಿಯೆಯನ್ನು ಹಿಂಪಡೆದು ಪಕ್ಷಪಾತ ಧೋರಣೆ ಮಾಡುತ್ತಿದ್ದಾರೆ. ಬಿಜೆಪಿಯವರಿಗೊಂದು
ಕಾನೂನು ಉಳಿದವರಿಗೆ ಒಂದು ಕಾನೂನು ಅಂತ ಸಂವಿಧಾನ ಹೇಳಿಲ್ಲ. ಎಲ್ಲರಿಗೂ ಸಮಾನ ನ್ಯಾಯ ನೀಡಿದೆ. ಅಧಿಕಾರಿಗಳು
ಕಾರ್ಯಾಂಗದ ಭಾಗವಾಗಿದ್ದೇವೆ ಎಂದು ಮರೆತಂತಿದೆ. ಶಾಸಕಾಂಗದ ಮಾತು ಪಾಲನೆ ಮಾಡುತ್ತಿರುವುದು ಪ್ರಜಾಪ್ರಭುತ್ವ
ವಿರೋಧಿ ಧೋರಣೆಯಾಗಿದೆ. ಗೃಹಸಚಿವರ ಪಕ್ಷಪಾತದಿಂದ ಕೈಗಳಿಂದ ದುಡಿದು ಜೀವನ ನಡೆಸುವ ಕಾರ್ಮಿಕರು ಬೀದಿಗೆ
ಬೀಳುವಂತಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಬಂಡೆ ಕಾರ್ಮಿಕರ ಪರವಾಗಿರುವ ಕಿಮ್ಮನೆ ಪಟ್ಟು ಆಡಳಿತಕ್ಕೆ ತೀವ್ರ ಮುಜುಗರ ಸೃಷ್ಟಿಯಾಗುತ್ತಿದೆ. ಶಿವಮೊಗ್ಗದ ಹಿರಿಯ ಭೂ ವಿಜ್ಞಾನಿ ಕಿಮ್ಮನೆ ವಿರುದ್ಧ ತೋರಿಸಿರುವ ಅಸಭ್ಯ ವರ್ತನೆಗೆ ಶಿವಮೊಗ್ಗದಲ್ಲಿಯೂ ವ್ಯಾಪಕವಾಗಿ ಆಕ್ರೋಶ ಹೊರಬಂದಿದೆ. ಜಿಲ್ಲಾಧಿಕಾರಿಗಳಿಗೂ ಈ ಘಟನೆ ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.