ವಿಂದ್ಯಾ ಮೇಡಂ ರಂಗಾಯಣದ ಪಾತ್ರಧಾರಿ
ಕಾರ್ಮಿಕರು ಕೊಡಲಿ ಹಿಡಿಯುವುದು ಅನಿವಾರ್ಯ..?
ಅಡಳಿತದಲ್ಲಿ ಅಧಿಕಾರಿಗಳದ್ದು ಆರ್ಎಸ್ಎಸ್ ಕುಟುಂಬದ ದರ್ಪ
ಶುಕ್ರವಾರ ಕಿಮ್ಮನೆ ಉಪವಾಸ
ಗೃಹಸಚಿವ ಆರಗ ಜ್ಞಾನೇಂದ್ರ ಅಧಿಕಾರಾವಧಿಯಲ್ಲಿ ನಿರಂತರ ಬಂಡೆ ಕಾರ್ಮಿಕರಿಗೆ ಅನ್ಯಾಯ ಎಸಗುತ್ತಿದ್ದಾರೆ. ಕಾರ್ಮಿಕರು ರಜಾ ದಿನಗಳಲ್ಲಿಯೂ ಬಿಳಿ ಬಟ್ಟೆ, ಶೂ ಹಾಕಬಾರದು. ಮೋಟರ್ ಸೈಕಲ್ನಲ್ಲಿ ಓಡಾಡಬಾರದಂತೆ. ಭೂ ವಿಜ್ಞಾನಿ ಅವಿನಾಶ್ ಕಾರ್ಮಿಕರನ್ನು ಗಡಿಪಾರು ಮಾಡುತ್ತೇನೆ ಎಂದು ಹೊದರಿಸುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಗುರುವಾರ ಬಂಡೆ ಕಾರ್ಮಿಕರ ಪರವಾಗಿ ಮೇಲಿನ ಕುರುವಳ್ಳಿಯಿಂದ ತೀರ್ಥಹಳ್ಳಿಯ ತಾಲ್ಲೂಕು ಕಚೇರಿವರೆಗೆ ಪಾದಯಾತ್ರೆ, ರಸ್ತೆತಡೆ, ಧರಣಿ ನಡೆಸಿ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಕಾರ್ಮಿಕರ ಹಸಿವಿಗೆ ಕಾನೂನಿಲ್ಲ. ಅನಿವಾರ್ಯವಾದರೆ ಕೊಡಲಿ ಹಿಡಿಯುವ ಸನ್ನಿವೇಶ
ಸೃಷ್ಟಿಯಾಗುತ್ತದೆ. ಸೊನಲೆಯಲ್ಲಿ ನಿರಂತರ ಅಕ್ರಮ ಮರಳು ಸಾಗಾಣೆಯಾಗುತ್ತಿದ್ದರು ಟ್ರಂಚ್ ಹೊಡೆಯುತ್ತಿಲ್ಲ.
ಗೃಹಸಚಿವರ ಅಣತಿಯಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಬಿಜೆಪಿ
ಮುಖಂಡರ ಅಕ್ರಮ ಮರಳು ಸಾಗಾಟ ಹೆಚ್ಚಿದೆ. ಅದನ್ನು ತಡೆಯಲು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಗಳು ವಿಫಲರಾಗಿದ್ದಾರೆ.
ಕಾರ್ಮಿಕರಿಗೆ ಕೆಲಸ ಕೊಡಿ ಇಲ್ಲ ಅನ್ನ, ಬದುಕು ನೀಡಬೇಕೆಂದು ಆಗ್ರಹಿಸಿದರು.
ಪ್ರಪಂಚದಲ್ಲಿ ಇಲ್ಲದೇ ಇರುವ ಲಾರಿಗಳು ತೀರ್ಥಹಳ್ಳಿಯಲ್ಲಿದೆ. ಗೇರು, ಟೈರು
ನೆಟ್ಟಗಿರದ ಲಾರಿಗಳು ಇಲ್ಲಿವೆ. ಅವುಗಳನ್ನು ಸೀಜ್ ಮಾಡುವ ಮೂಲಕ ಲಕ್ಷ ಲಕ್ಷ ಹಣ ಕೇಳುತ್ತಿದ್ದಾರೆ.
ಅಲ್ಲದೇ ಕಾರ್ಮಿಕರು ಹಣ ಒಟ್ಟುಗೂಡಿಸಿ ಟೆಂಡರ್ ಹಾಕಿದರೆ ಆ ಪ್ರಕ್ರಿಯೆಯನ್ನು ನಿಲ್ಲಿಸಿ ಬಿಜೆಪಿಯವರಿಗೆ
ನೀಡಲಾಗುತ್ತಿದೆ. ಅಲ್ಲದೆ ಕಂದಾಯ, ಪೊಲೀಸ್, ಹಿರಿಯ ಅಧಿಕಾರಿಗಳಿಗೆ ಹಣ ನೀಡಬೇಕಂತೆ. ಇದರಿಂದಾಗಿ
ಕಲ್ಲು ಸಾಮಗ್ರಿ ಬೆಲೆ ಗಗನಕ್ಕೇರುತ್ತಿದೆ. ಇದರ ಹೊರೆ ಪರೋಕ್ಷವಾಗಿ ರೈತರ ಮೇಲೆ ಬೀಳುತ್ತಿದೆ. ಅಧಿಕಾರಿಗಳು
ನೆನಪಿಟ್ಟುಕೊಳ್ಳಬೇಕು ತೀರ್ಥಹಳ್ಳಿ ಸಮಾಜವಾದ ಬೆಳೆದ ನಾಡು. ಶೋಷಣೆ ಮುಂದುವರೆಸಿದರೆ ಪಾಠ ಕಲಿಸುತ್ತೇವೆ
ಎಂದು ಜಾಗ್ರತೆ ನೀಡಿದರು.
ಬಂಡವಾಳ ಶಾಯಿಗಳಿಗೆ ಬಂಡೆ ಮಾರಾಟ ಮಾಡಲಾಗುತ್ತಿದೆ. ಸಾಮ್ರಾಜ್ಯಶಾಯಿ ವ್ಯವಸ್ಥೆಗೆ ದಿಕ್ಕಾರವಿದೆ. ಕಾರ್ಮಿಕರು ಬೀದಿಗೆ ಬಂದರೆ ಅದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮುಖ್ಯ ಕಾರ್ಯದರ್ಶಿ ನೇರ ಹೊಣೆ. ಕಳೆದ 10 ವರ್ಷದಿಂದ 12 ಬಾರಿ ಜೆಸಿಬಿ ದಾಳಿ, 62 ಬಾರಿ ಕಾರ್ಮಿಕರ ಮೇಲೆ ದಾಳಿ, 8 ಬಾರಿ ಉಳಿ ಸುತ್ತಿಗೆ ಮೇಲೆ ದಾಳಿಯಾಗಿದೆ. ಪಂಚಾಯತ್ ರಾಜ್ ಕಾಯ್ದೆಗೆ ಅಗೌರವ ತರುತ್ತಿರುವ ಅಧಿಕಾರಿಗಳ ವಿರುದ್ಧ ನಿರ್ಣಯ ಪಡೆಯುತ್ತೇವೆ. ಅಧಿಕಾರಿಗಳು ಜನರನ್ನು ಪೀಡಿಸುತ್ತಿದ್ದು ಲೋಕಾಯುಕ್ತಕ್ಕೆ ದೂರು ನೀಡಲಾಗುತ್ತದೆ ಎಂದು ನಿಶ್ಚಲ್ ಜಾದೂಗಾರ್ ಹೇಳಿದರು.
ಪ್ರತಿಭಟನೆಗೆ ತಾಲ್ಲೂಕು ರೈತ ಸಂಘ, ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ, ಅಸಂಘಟಿತ
ಕಾರ್ಮಿಕರ ಸಂಘಟನೆ ಬೆಂಬಲ ಸೂಚಿಸಿತ್ತು. ಪ್ರತಿಭಟನೆಯಲ್ಲಿ ಚಿಂತಕ ನೆಂಪೆ ದೇವರಾಜ್, ಹೊಸಕೊಪ್ಪ
ಸುಂದರೇಶ್, ಕೊರೋಡಿ ಕೃಷ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ನಿಶ್ಚಲ್ ಜಾದೂಗಾರ್, ಅನಂದ ಸಿ,
ಕುರುವಳ್ಳಿ ನಾಗರಾಜ್, ಅನಿತಾ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ ಶೆಟ್ಟಿ ಮಾತನಾಡಿದರು.