ಕಾರ್ಮಿಕ ಮುಖಂಡ ಮಂಜುನಾಥ
ಎಸ್ ಆರೋಪ
ಗೃಹಸಚಿವರಿಂದ ಕಾರ್ಮಿಕರಿಗೆ 50 ಲಕ್ಷ ಪ್ರಯೋಜನ
ಕಿಮ್ಮನೆ ಅವಧಿಯಲ್ಲೇ ಕ್ವಾರಿಗೆ ಒಂದು ತಿಂಗಳು
ಬೀಗ
ಕಾರ್ಮಿಕರನ್ನು ಒಡೆದಾಳುವ ನೀತಿ ಬೇಡ
ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಬಂಡೆ ಕಾರ್ಮಿಕರ ವಿಚಾರದಲ್ಲಿ ಕಿಮ್ಮನೆ ರತ್ನಾಕರ್ ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ವಾಸ್ತವವಾಗಿ..ಇಲ್ಲಿ ಕೆಲಸ ನಿಲುಗಡೆ ಆಗಲು ಅನುದೀಪ್ ಎಂಬ ವ್ಯಕ್ತಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿರುವುದು ಮುಖ್ಯ ಕಾರಣವಾಗಿದೆ. ಅನುದೀಪ್ ಎಂಬ ವ್ಯಕ್ತಿಯ ಹಿಂದೆ ಯಾರಿದ್ದಾರೆ. ಅವರಿಗೆ ಏನು ಲಾಭ ಎಂಬ ಬಗ್ಗೆ ವಿಚಾರಿಸಿದರೆ ವಿಚಾರ ಬಯಲಿಗೆ ಬರುತ್ತದೆ ಎಂದು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪೃಥ್ವಿಶ್ರಮ ಸಂಘದ ಮೂಲಕ ಕಾರ್ಮಿಕರಿಗೆ 6 ಎಕರೆ ಪ್ರದೇಶದ ಮಾಲೀಕತ್ವ ಕೊಡಿಸುವ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಸತತವಾಗಿ ಆರಗ ಜ್ಞಾನೇಂದ್ರ ಬೆಂಬಲ ನೀಡಿದ್ದಾರೆ. ಇತ್ತೀಚೆಗಷ್ಟೇ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ಗೆ ಅವರು ಕಾರ್ಮಿಕರಿಗೆ ಮಾಲೀಕತ್ವ ನೀಡಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕೆಂದು ತಾಕೀತು ಮಾಡಿದರಲ್ಲದೇ ಕಾರ್ಮಿಕರ ನಾಯಕರ ಜೊತೆ ಭೇಟಿಯನ್ನು ಏರ್ಪಡಿಸಿದ್ದಾರೆ. ಕಾರ್ಮಿಕರ ಸಂಘಕ್ಕೆ ಗುತ್ತಿಗೆ ನೀಡಬೇಕೆಂದು ಮನವಿ ಕೂಡ ಸಲ್ಲಿಸಿದ್ದರು ಎಂದರು.
ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೇರವಾಗಿ 800 ಕಾರ್ಮಿಕ ಕುಟುಂಬಗಳು ಹಾಗೂ ಪರೋಕ್ಷವಾಗಿ ಬೆಂಬಲಿತ ಉದ್ಯಮಗಳು ನಡೆಯುತ್ತಿದೆ. ಅಂತಹ ಸುಮಾರು 1000ಕ್ಕೂ ಹೆಚ್ಚು ಕುಟುಂಬಗಳಿವೆ. ಇಂತಹ ರಾಜಕೀಯ ವೇದಿಕೆಯಿಂದ ಕಾರ್ಮಿಕ ಕುಟುಂಬಗಳನ್ನು ಬೀದಿಗೆ ತಳ್ಳಿದಂತಾಗುತ್ತಿದೆ. ಕಾರ್ಮಿಕರ ಹೆಸರಲ್ಲಿ ರಾಜಕೀಯ ಬೆರೆಸುವುದು ಬೇಡ ಎಂದು ಮಂಜುನಾಥ್ ತಾಕೀತು ಮಾಡಿದರು.
ಕಾರ್ಮಿಕ ಇಲಾಖೆ 2007ರಿಂದ ಅಸ್ತಿತ್ವದಲ್ಲಿದೆ. ಎರಡು ಅವಧಿಗೆ ಶಾಸಕರಾಗಿದ್ದ ಕಿಮ್ಮನೆ ಬಂಡೆ ಕಾರ್ಮಿಕರ ಕುರಿತು ಯಾವ ಕಲ್ಯಾಣ ಕೆಲಸವನ್ನು ಮಾಡಲಿಲ್ಲ. ಆರಗ ಜ್ಞಾನೇಂದ್ರ ಅಧಿಕಾರಕ್ಕೆ ಬರುತ್ತಿದ್ದಂತೆ
ಇಲ್ಲಿನ ಕಾರ್ಮಿಕರಗೆ ವಿಶೇಷ ಸೌಲಭ್ಯ ನೀಡಿದ್ದಾರೆ. ಪ್ರಥ್ವಿಶ್ರಮ ಸಂಘದ ಮೂಲಕ 21ಲಕ್ಷದ 87 ಸಾವಿರಗಳನ್ನು ವಿದ್ಯಾರ್ಥಿಗಳಿಗೆ ವೇತನ ನೀಡಿದ್ದೇವೆ. ಇಲ್ಲಿಯ ವರೆಗೆ ಕಾರ್ಮಿಕರಿಗಾಗಿ ಅಂದಾಜು 50 ಲಕ್ಷಕ್ಕೂ ಹೆಚ್ಚಿನ ಪ್ರಯೋಜನ
ಕಾರ್ಮಿಕ ಕುಟುಂಬಗಳಿಗೆ ಲಭಿಸಿದೆ. ಲಾಕ್ ಡೌನ್ ಸಂಧರ್ಭದಲ್ಲಿ 884 ಕಾರ್ಮಿಕ ಕುಟುಂಬಕ್ಕೆ ತಿಂಗಳಿಗೆ ಆಗುವಷ್ಟು ಪಡಿತರ ನೀಡಿದ್ದಾರೆ. ಹೀಗಿದ್ದರು ಅವರನ್ನು
ಕಾರ್ಮಿಕ ವಿರೋಧಿ ಎಂಬಂತೆ ಬಿಂಬಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಟಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ದಲಿತರು ಮತ್ತು ಬಡ ಬಂಡೆ ಕಾರ್ಮಿಕ ಸಂಘದ ಅಧ್ಯಕ್ಷ ರೇಣುಕರಾಜ್, ವಾಸಪ್ಪ, ರಾಜ, ಕೃಷ್ಣಕುಮಾರ, ಸುಬ್ರಮಣ್ಯ, ಮಂಜುನಾಥ್ ಉಪಸ್ಥಿತರಿದ್ದರು.