ಸಂಸದ ಅನಂತ ಕುಮಾರ್
ಹೆಗಡೆ ಭೇಟಿಯಾದ ಆರಗ
ಅಡಿಕೆ ಬೆಳೆ ಸಮಸ್ಯೆ
ಕುರಿತು ಸುದೀರ್ಘ ಚರ್ಚೆ
ಬಿಜೆಪಿ ಪಾಲಿನ ಪೈರ್ಬ್ರಾಂಡ್ ಎನಿಸಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಅವರನ್ನು ಗೃಹಸಚಿವ ಆರಗ ಜ್ಞಾನೇಂದ್ರ ಅವರ ನಿವಾಸದಲ್ಲಿ ಚರ್ಚಿಸಿದರು. ರಾಜಕೀಯ ವಿಚಾರದ ಜೊತೆ ಪ್ರಮುಖವಾಗಿ ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣ ಮತ್ತು ಅಡಿಕೆ ಆಮದು ಪ್ರಕ್ರಿಯೆಯಿಂದ ರಾಜ್ಯದ ಅಡಿಕೆ ಬೆಳೆಗಾರರ ಮೇಲೆ ಉಂಟಾಗುವ ಪರಿಣಾಮ ಹಾಗೂ ಸಮಸ್ಯೆಗಳ ಪರಿಹಾರ ಕುರಿತು ಈ ಇಬ್ಬರು ಹಿರಿಯ ಬಿಜೆಪಿ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ತೀರ್ಥಹಳ್ಳಿ
ಮಂಡಲ ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಹೆದ್ದೂರು ನವೀನ್,
ಯುವ ಮುಖಂಡ ಗುರು ಸಿ. ಗೌಡ ಉಪಸ್ಥಿತರಿದ್ದರು.