ಅಧ್ಯಕ್ಷರ ಹುದ್ದೆಯಿಂದ
ದಾಕ್ಷಾಯಣಿ ಬಾಬಣ್ಣ ವಜಾ
ಅಧ್ಯಕ್ಷೆ ದಾಕ್ಷಾಯಣಿ
ಬಾಬಣ್ಣ ವಿರುದ್ದ ಅವಿಶ್ವಾಸ ಮಂಡನೆ
ಅವಿಶ್ವಾಸ ಚುನಾವಣೆ
ನಡೆಸಿದ ಎಸಿ ಡೊಡ್ಡನಗೌಡರು
ಅಂಡುಸುಟ್ಟ ಬೆಕ್ಕಿನಂತಾದ
ತೆರೆಮರೆಯ ನಾಯಕರು
ವಜಾಗೊಂಡ ಅಧ್ಯಕ್ಷೆ ದಾಕ್ಷಾಯಣಿ ಬಾಬಣ್ಣ |
ತೀರ್ಥಹಳ್ಳಿ ತಾಲ್ಲೂಕಿನ
14 ಸದಸ್ಯ ಬಲದ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ದ ಬಹುತೇಕ ಕಾಂಗ್ರೆಸ, ಬಿಜೆಪಿ
ಬೆಂಬಲಿಗರು ಅವಿಶ್ವಾಸ ಮಂಡಿಸಿದ ಘಟನೆ ಮಂಗಳವಾರ ನಡೆದಿದೆ. ಸುಮಾರು ಒಂದೂವರೆ ತಿಂಗಳಿನಿಂದ ಬೆಜ್ಜವಳ್ಳಿ
ಪಂಚಾಯಿತಿಯಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಕ್ಕೆ ತೆರಬಿದ್ದಿದೆ.
ಈ ಹಿಂದೆ ಪಂಚಾಯಿತಿಯ
12 ಸದಸ್ಯರು ಉಪವಿಭಾಗಾಧಿಕಾರಿ ಮುಂಭಾಗ ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಆಗಿನ
ಎಸಿ ಅಧ್ಯಕ್ಷರ ಆಯ್ಕೆಗೆ ದಿನಾಂಕ ನಿಗಧಿಗೊಳಿಸಿ ಆದೇಶ ಹೊರಡಿಸಿದ್ದರು. ಆದರೆ ದಿನಾಂಕ ನಿಗಧಿ ಮಾಡುವಾಗ
ಉಪವಿಭಾಗಾಧಿಕಾರಿ ಕಾನೂನು ಪಾಲಿಸಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷೆ ದಾಕ್ಷಾಯಣಿ ಬಾಬಣ್ಣ ಹೈಕೋರ್ಟ್
ಮೆಟ್ಟಿಲೇರಿದ್ದರು. ಅಧ್ಯಕ್ಷರ ಕೋರಿಕೆಯನ್ನು ಸಿಂಧುಗೊಳಿಸಿ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಇದೀಗ ಕೋರ್ಟ್ ಅದೇಶದಂತೆ
ನೂತನ ಉಪವಿಭಾಗಾಧಿಕಾರಿ ದೊಡ್ಡನಗೌಡರು ಅವಿಶ್ವಾಸ ಮಂಡನೆಗೆ ದಿನಾಂಕ ನಿಗಧಿ ಮಾಡಿದೆ.
13 ಜನ ಸದಸ್ಯರ ಪೈಕಿ ಓರ್ವರು ತಟಸ್ಥ ನಿಲುವು ಹೊಂದಿದ್ದು ಉಳಿದ 12 ಕಾಂಗ್ರೆಸ್, ಬಿಜೆಪಿ ಬೆಂಬಲಿತ
ಸದಸ್ಯರು ಅವಿಶ್ವಾಸ ಮಂಡಿಸಿದ್ದು, ಅಧ್ಯಕ್ಷರ ಸ್ಥಾನದಿಂದ ದಾಕ್ಷಾಯಣಿ ಬಾಬಣ್ಣ ಅವರನು ವಜಾಗೊಳಿಸಲಾಗಿದೆ.
ರಾಜಕೀಯವಾಗಿ ಸದಸ್ಯರ
ವಿಶ್ವಾಸ ಕಳೆದುಕೊಂಡ ದಾಕ್ಷಾಯಣಿ ಬಾಬಣ್ಣ ಅವರನ್ನು ಅಧ್ಯಕ್ಷರಾಗಿ ಮುಂದುವರೆಸುವ ನಿಟ್ಟಿನಲ್ಲಿ ತೆರೆಮರೆಯ
ರಾಜಕೀಯ ಬೆಳವಣಿಗೆ ನಡೆದಿತ್ತು. ಕೆಲವು ಬಿಜೆಪಿ ಮುಖಂಡರು ಅಧ್ಯಕ್ಷರ ಪರವಾಗಿ ಬ್ಯಾಟಿಂಗ್ ಬೀಸಿದ್ದರು.
ಕೋರ್ಟ್ ಮೊರೆಹೋಗುವುದಕ್ಕೂ ರಾಜಕೀಯವಾಗಿ ಬೆಂಬಲ ನೀಡಿದ್ದರು. ಆದರೀಗ ಬಹುತೇಕ ಬಿಜೆಪಿ ಸದಸ್ಯರೂ
ಅವಿಶ್ವಾಸ ಮಂಡಿಸಿದ್ದು ಬೆಂಬಲಕ್ಕೆ ನಿಂತವರು ಅಂಡುಸುಟ್ಟ ಬೆಕ್ಕಿನಂತಾಗಿದ್ದಾರೆ.