ಒಂದು ಗಂಟೆಯಿಂದ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಬಂದ್
7 ಗಂಟೆಗೆ ಧರೆಗುರುಳಿದ ಮರ
11ನೇ ತಿರುವಿನಲ್ಲಿ ಮರ ತೆರವಿಗೆ ಪರದಾಟ
ಅರಣ್ಯ ಇಲಾಖೆ, ಹೆದ್ದಾರಿ ಪ್ರಾಧಿಕಾರದಿಂದ ಪ್ರಯಾಣಿಕರ ನಿರ್ಲಕ್ಷ್ಯ
ದಕ್ಷಿಣದ ಚಿರಾಪುಂಜಿ ಆಗುಂಬೆಯಲ್ಲಿ 267 ಮಿಲಿ ಮೀಟರ್ ಮಳೆ ದಾಖಲಾಗುತ್ತಿದೆ. ಮಳೆಕಾಡಿನ ನಡುವೆ ಮರ ಬಿದ್ದು ಗಂಟೆಗಳು ಕಳೆಯುತ್ತಿದ್ದರು ತೆರವು ಕಾರ್ಯಾಚರಣೆಗೆ ಅರಣ್ಯ ಇಲಾಖೆ ಮುಂದಾಗಿರಲಿಲ್ಲ. ಶಿವಮೊಗ್ಗ, ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಮಾರ್ಗವಾಗಿ ಮಣಿಪಾಲ, ಉಡುಪಿ, ಮಂಗಳೂರು ಕಡೆಗೆ ಹೋಗುವ ಪ್ರಯಾಣಿಕರಿಗೆ ತೊಂದರೆಯುಂಟಾಗಿತ್ತು.
ಗುರುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗ ಮಧ್ಯೆಯ 18ನೇ ಸುತ್ತಿನಲ್ಲಿ ಮರ ಬಿದ್ದು ಒಂದು ಗಂಟೆಯ ಮೇಲೆ ಸಾರ್ವಜನಿಕರು, ಇಲಾಖೆಯಿಂದ ತೆರವು ಕಾರ್ಯಾಚರಣೆ ನಡೆಸಿದರು. ಅರಣ್ಯ ಇಲಾಖೆ ಉಪ ವಲಯಾರಣ್ಯಾಧಿಕಾರಿ ಗುರುರಾಜ್, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮರ ತೆರವಿಗೆ ಸಹಕರಿಸಿದರು.
ಆಗುಂಬೆ ಘಾಟಿ ನೋಡಲು ಮಾತ್ರ ಸುಂದರವಾಗಿ ಕಾಣಿಸುತ್ತಿದ್ದರು ರಾತ್ರಿ ವೇಳೆ ಭಯಂಕರ ಅನುಭವ ನೀಡುತ್ತದೆ. ಮರ ಬಿದ್ದರೆ, ಅಪಘಾತ ಸಂಭವಿಸಿದರೆ ಹೆದ್ದಾರಿ ಪ್ರಾಧಿಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಮರ ಕಟ್ಟಿಂಗ್, ಟೋಯಿಂಗ್, ಪ್ರಾಥಮಿಕ ಚಿಕಿತ್ಸೆ ಯಾವುದೂ ಕೂಡ ಈ ಭಾಗದಲ್ಲಿ ಸಿಗುವುದಿಲ್ಲ. ಅರಣ್ಯ ಇಲಾಖೆ ಈ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದರೂ ಮರ ತೆರವು ಕಾರ್ಯಾಚರಣೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದು ಇತ್ತೀಚೆಗೆ ಮರವೊಂದು ಬಿದ್ದು ಸಂಚಾರಕ್ಕೆ ಅಡ್ಡಿಯುಂಟು ಮಾಡಿತ್ತು. ಬೀಳುವ ಹಂತದಲ್ಲಿರುವ ಮರಗಳ ತೆರವು ಕೆಲಸ ಕೂಡ ನಡೆಯದೇ ಇರುವುದು ಪ್ರಯಾಣಿಕರಿಗೆ ತೊಂದರೆಯುಂಟು ಮಾಡುತ್ತಿದೆ.

