ಹೆದ್ದೂರು ನವೀನ್ ಜಿಲ್ಲಾ ಬಿಜೆಪಿ
ಪ್ರಧಾನ ಕಾರ್ಯದರ್ಶಿ
ರಕ್ಷಿತ್ ಮೇಗರವಳ್ಳಿ ಮಂಡಲ
ಬಿಜೆಪಿ ಪ್ರಧಾನ ಕಾರ್ಯದರ್ಶಿ
ಶಿವಮೊಗ್ಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಹೆದ್ದೂರು ನವೀನ್ ಆಯ್ಕೆಯಾಗಿದ್ದಾರೆ. ಬಿಜೆಪಿಯ ಅತ್ಯಂತ ನಿಷ್ಠ ಹಾಗೂ ಸಂವೇದನಾಶೀಲ ಯುವ ಮುಖಂಡ ಎಂಬ ಗೌರವಕ್ಕೆ ಪಾತ್ರವಾಗಿರುವ ನವೀನ್ ಇನ್ನು ಮುಂದೆ ಜಿಲ್ಲೆಯ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.
ತೀರ್ಥಹಳ್ಳಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ರಕ್ಷಿತ್ ಮೇಗರವಳ್ಳಿ ನೇಮಕಗೊಂಡಿದ್ದಾರೆ. ಇದಕ್ಕೂ ಮೊದಲು ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು. ರಕ್ಷಿತ್ ತಾಲ್ಲೂಕಿನಾದ್ಯಂತ ಯುವಪಡೆಯನ್ನು ಸಂಘಟಿಸುವಲ್ಲಿ ಸಿದ್ದಹಸ್ತರಾಗಿದ್ದು ವಿಶೇಷವಾಗಿ ಕಳೆದ ಬಾರಿ ಆರಗ ಜ್ಞಾನೇಂದ್ರರವರು ದಾಖಲೆ ಅಂತರದ ಜಯ ಸಾಧಿಸುವಲ್ಲಿ ಇವರ ನೇತೃತ್ವದ ಯುವಪಡೆ ಅಪಾರ ಸವಾಲುಗಳನ್ನು ನಿರ್ವಹಿಸಿ ಕಾರ್ಯ ನಿರ್ವಹಿಸಿತ್ತು.

