ಕಿಮ್ಮನೆಗೆ ಆಪ್ತ ಸಮಾಲೋಚನೆ ಅಗತ್ಯವಿದೆ
ಕಿಮ್ಮನೆ ರತ್ನಾಕರ್ ಇತ್ತೀಚಿಗೆ ಸಭ್ಯತೆ, ಎಲ್ಲೆ ಮೀರಿ ಮಾತನಾಡುತ್ತಿರುವುದು ನೋಡಿದರೆ ಅವರಿಗೆ ಒಳ್ಳೆಯ ಆಪ್ತ ಸಮಾಲೋಚನೆ ಅಗತ್ಯವಿದೆ ಎನಿಸುತ್ತಿದೆ. ತಾಲೂಕಿಗೆ ಅವರ ಮತ್ತು ನನ್ನ ಕೊಡುಗೆ ಏನು ಎಂಬುದರ ಪರಮರ್ಶೆ ನಡೆಯಲಿ. ಬಹಿರಂಗ ಸವಾಲಿಗೆ ನಾನು ಸಿದ್ದ ಎಂದು ಶಾಸಕ ಆರಗ ಜ್ಞಾನೇಂದ್ರ ಗುಡುಗಿದ್ದಾರೆ.
ಪಕ್ಷದ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉದ್ದಕ್ಕೂ ಕಿಮ್ಮನೆ ರತ್ನಾಕರ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಡಿ.ಎಸ್. ವಿಶ್ವನಾಥ್ ಶೆಟ್ಟಿ ವಿರುದ್ಧ ಕಿಡಿಕಾರಿದರು.
ಕಿಮ್ಮನೆಗೆ ವಿಶ್ವನಾಥ್ ಶೆಟ್ಟಿ ಗುರುವಾಗಿದ್ದಾರೋ ಅಥವಾ ವಿಶ್ವನಾಥ್ ಶೆಟ್ಟಿಗೆ ಕಿಮ್ಮನೆ ಗುರುವೋ ಗೊತ್ತಿಲ್ಲ.
ಬಗರ್ ಹುಕುಂ ವಿಷಯದಲ್ಲಿ ನಾನು ಪಕ್ಷಪಾತಿ ಎನ್ನುವ ಕಿಮ್ಮನೆ ವಿಶ್ವನಾಥ್ ಶೆಟ್ಟಿ ಹೆಂಡತಿ, ಮಗನ ಹೆಸರಲ್ಲಿ ಜಮೀನು ಮಂಜೂರು ಮಾಡಿದ್ದಾರೆ.
ಅವರ ಬೆಂಬಲಿಗರು ಎನ್ನುವ ಕಾರಣಕ್ಕೆ ಮಂಡಗದ್ದೆಯಲ್ಲಿ ಒಬ್ಬನೇ ವ್ಯಕ್ತಿಗೆ ಮೂವತ್ತು ಮೂರು ಎಕರೆ ಬೇರೆ ಬೇರೆ ಹೆಸರಲ್ಲಿ ಒಬ್ಬನೇ ವ್ಯಕ್ತಿಗೆ ಮಂಜೂರು ಮಾಡಿದ್ದಾರೆ ಇದನ್ನು ನಾನು ಪ್ರಶ್ನೆ ಮಾಡಬಾರದೆ...?
ವಿಶ್ವನಾಥ್ ಶೆಟ್ಟಿ ಎಂತವರು ಎಂದು ಇಡೀ ತೀರ್ಥಹಳ್ಳಿಗೆ ಗೊತ್ತು. ಹಿಂದೆ ಹೈಸ್ಕೂಲ್ ಕಮಿಟಿ ಅಧ್ಯಕ್ಷ ಆಗಿದ್ದಾಗ ಅವರು ಶಾಲೆಗೆ ಸೇರಿದ ಹಲಸಿನ ನಾಟವನ್ನೇ ಮಾಯ ಮಾಡಿದ್ದರು. ನಂತರ ಶ್ರೀ ರಾಮೇಶ್ವರ ದೇವಾಲಯ ಸಮಿತಿ ಸೇರಿಕೊಂಡು ಅಲ್ಲಿಯೂ ಹಲಸಿನ ನಾಟ ಲಪಟಾಯಿಸಿ ಅವರ ಮನೆಯಲ್ಲಿಟ್ಟುಕೊಂಡು ಕೇಸು ಕೂಡ ಆಗಿದೆ ಇಂತವರನ್ನು ಮುಂದಿಟ್ಟುಕೊಂಡು ನನ್ನ ವಿರುದ್ಧ ಭಾಷಣ ಮಾಡಿಸುತ್ತಾರೆ ಎಂದು ಕಿಡಿಕಾರಿದರು.
ಕಿಮ್ಮನೆಯಂತ ಸಣ್ಣ ಮನಸಿನ ವ್ಯಕ್ತಿಯನ್ನೇ ನಾನು ನೋಡಿಲ್ಲ ಅವರು ಭಾರಿ ಓದಿದ್ದಿನಿ ಎಂದು ನಾಟಕ ಮಾಡುತ್ತಾರೆ ವಿಚಾರವಾದಿ ಎನ್ನುತ್ತಾರೆ ಗಾಂಧಿ, ಬಸವ ಎನ್ನುತ್ತಾರೆ ಆದರೆ ತೋರಿಕೆಗೆ ಮಡಿವಸ್ತ್ರ ಹಾಕಿ ದೇವಸ್ಥಾನದಲ್ಲೂ ಸುದ್ದಿಗೋಷ್ಠಿ ನಡೆಸಿ ಅಪಚಾರ ಮಾಡುತ್ತಾರೆ. ಬ್ರಾಹ್ಮಣರ ಜನಿವಾರ ಸುಟ್ಟವರು ನನ್ನ ಬೆಳೆಸಿದ್ದು ಬ್ರಾಹ್ಮಣರೆ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಂತ್ಲದಲ್ಲಿ ನನ್ನ ಮಗ ಜಾಗ ಕೊಂಡರೆ ಏನು ತಪ್ಪು. ಅವನು ಕೆಲಸ ಮಾಡಿ ದುಡಿದ ಹಣದಿಂದ ಕೊಂಡಿದ್ದಾನೆ. ಬಡವರು ಬೆಳೆಯಲೇ ಬಾರದ ಎಂದು ಪ್ರಶ್ನೆ ಮಾಡಿದ ಅವರು ಕಿಮ್ಮನೆ ತರ ಮಗನನ್ನು ಅಮೇರಿಕಾ ಬಿಟ್ಟು ಓದಿಸುವ ಶಕ್ತಿ ಬಡವರಾದ ನಮಗೆ ಇಲ್ಲ ಎಂದರು.
ಬಗರ್ ಹುಕುಂ ವಿಷಯದಲ್ಲಿ ಕಿಮ್ಮನೆ ರೀತಿ ನಾನು ಪಕ್ಷಪಾತ ಮಾಡಿಲ್ಲ ಅನರ್ಹರಿಗೆ ಮಂಜೂರು ಮಾಡಿದ್ದು ಮಾತ್ರ ಪ್ರಶ್ನೆ ಮಾಡಿದ್ದೇನೆ ಎಂದವರು ಸ್ಪಷ್ಟವಾಗಿ ಹೇಳಿದರು.