ಆರಗ ಜ್ಞಾನೇಂದ್ರ ಕಟ್ಟು ನಿಟ್ಟಿನ
ತನಿಖೆಗೆ ಆದೇಶ
ರಾಜೀನಾಮೆ
ಪಡೆಯುವ ಪ್ರಶ್ನೆಯೇ ಇಲ್ಲ - ಸಿಎಂ ಬಸವರಾಜ ಬೊಮ್ಮಾಯಿ
ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧ ಪಟ್ಟಂತೆ ಗೃಹ ಸಚಿವ ಆರಗ ಜ್ಞಾನೆಂದ್ರ
ಅವರ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದು ಬೆಳಿಗ್ಗೆ ಬೆಂಗಳೂರು ಆರ್ಟಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರೊಂದಿಗೆ
ಮಾತನಾಡಿದ ಅವರು ಪ್ರಕರಣ ಬೆಳಕಿಗೆ ಬರುತ್ತಲೇ ಆರಗ ಜ್ಞಾನೇಂದ್ರ ಕಟ್ಟು ನಿಟ್ಟು ತನಿಖೆಗೆ ಆದೇಶ ಮಾಡಿದ್ದಾರೆ. ಯಾವ ಪ್ರಭಾವಿಯನ್ನು ರಕ್ಷಿಸಲು ಮುಂದಾಗಿಲ್ಲ ಪ್ರಕರಣದ 50 ಆರೋಪಿಗಳಲ್ಲಿ 30 ಜನ ಅಧಿಕಾರಗಳೇ ಇದ್ದಾರೆ. ಹಾಗಿದ್ದೂ ಕೂಡ
ಅವರು ಹಸ್ತಕ್ಷೇಪ ಮಾಡದಿರುವುದು ಅವರ ದಕ್ಷತೆ, ಪ್ರಾಮಾಣಿಕತೆ ತೋರುತ್ತದೆ. ಅವರು ಇನ್ನೇನು ಮಾಡಬೇಕಿತ್ತು. ಈಗ ಅವರ ರಾಜೀನಾಮೆಗೆ ಒತ್ತಾಯ
ಮಾಡುತ್ತಿರುವ ಸಿದ್ದರಾಮಯ್ಯ ಅವರ ಕಾಲದಲ್ಲಿ ನಡೆದ ಪಿಎಸ್ಐ ಹಗರಣದಲ್ಲಿ
ಯಾರನ್ನು ಬಂಧಿಸಿದ್ದರು. ಶಿಕ್ಷೆ ಕೊಡಿಸಿದ್ದರು
ಎಂಬುದನ್ನು ಮೊದಲು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.
ಇದಕ್ಕೂ ಮೊದಲು ಮಾಜಿ ಸಿಎಂ
ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಬಂಧನ ಆಗುತ್ತಿದ್ದ
ಹಾಗೆ ನೈತಿಕ ಹೊಣೆ ಹೊತ್ತು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ
ರಾಜೀನಾಮೆ ನೀಡಬೇಕು ಎಂದು ಒತ್ತಾಯ ಮಾಡಿದ್ದರು.
