ವಿಶ್ವಕರ್ಮ ಚಂಡೆ ಬಳಗದ ಪ್ರಮುಖರು
ಹೊದಲ ವಿಶ್ವಕರ್ಮ
ಚಂಡೆ ಬಳಗದ ಪ್ರಮುಖರಾದ ನಾಗರಾಜ ಆಚಾರ್ಯ ತೀವ್ರ ಅನಾರೋಗ್ಯದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ
ತಡರಾತ್ರಿ ವಿಧಿವಶರಾಗಿದ್ದಾರೆ.
ಹೊದಲ ಸ್ಪೋರ್ಟ್ಸ್
ಅಸೋಸಿಯೇಷನ್ ಸದಸ್ಯ, ಹೊದಲ ಶ್ರೀ ಗಣಪತಿ ಸೇವಾ ಸಮಿತಿಯ ಅದ್ಯಕ್ಷ, ವಿಶ್ವಕರ್ಮ ಚಂಡೆ ಬಳಗದ ಪ್ರಮುಖರಾಗಿದ್ದ
ಅವರು ರಾಜ್ಯದ ಅನೇಕ ಕಡೆಗಳಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಕ್ರೀಡಾ ಕ್ಷೇತ್ರದ ಕಾರ್ಯಕ್ರಮಗಳಲ್ಲಿ
ಸಕ್ರಿಯವಾಗಿ ಚಂಡೆ ವಾದನದಲ್ಲಿ ಭಾಗವಹಿಸುತ್ತಿದ್ದರು. ಅವರಿಗೆ ಪತ್ನಿ, ಎರಡು ಗಂಡು ಮಕ್ಕಳು ಇದ್ದಾರೆ.
