ಕನ್ನಂಗಿ ಸೊಸೈಟಿ ನೂತನ ಅಧ್ಯಕ್ಷರಾಗಿ ಸಿರಿಬೈಲು ಕೃಷ್ಣಮೂರ್ತಿ
ಬಿಜೆಪಿ ಬೆಂಬಲಿತರ ರಾಜಕೀಯ ಆಟಕ್ಕೆ ಕಾಂಗ್ರೆಸ್ ಗೆ ಪ್ರಯಾಸ
ತೀರ್ಥಹಳ್ಳಿ ತಾಲೂಕಿನ ರಾಜಕೀಯ ವಲಯದಲ್ಲಿ ಬಾರೀ ಕುತೂಹಲ ಮೂಡಿಸಿದ್ದ ಕನ್ನಂಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಧ್ಯಕ್ಷರ ಆಯ್ಕೆ ಕೊನೆಗೆ ಕಗ್ಗಂಟ್ಟಿನಲ್ಲೇ ಕೊನೆಗೊಂಡಿದೆ.
ಶುಕ್ರವಾರ ನಡೆದ ಚುನಾವಣೆಯಲ್ಲಿ ಬಹುಮತ ಇದ್ದರು ಸಿರಿಬೈಲು ಕೃಷ್ಣಮೂರ್ತಿ ಪ್ರಯಾಸದಲ್ಲಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
2ವರ್ಷದ ಹಿಂದೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದ ಹೊರಬೈಲು ರಾಮಕೃಷ್ಣ ಒಪ್ಪಂದ ಅನ್ವಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡದ ಕಾರಣ ಬಾರೀ ಗೊಂದಲ ಉಂಟಾಗಿತ್ತು. ಕೊನೆಯಲ್ಲಿ ಒತ್ತಡ ಹೆಚ್ಚಾದ ಕಾರಣ ರಾಮಕೃಷ್ಣ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.
ಹೊಸ ಅಧ್ಯಕ್ಷರ ಆಯ್ಕೆ ಮಾತ್ರ ಆಡಳಿತ ಮಂಡಳಿಯಲ್ಲಿ ಬಹುಮತ ಹೊಂದಿದ್ದ ಗುಂಪಿನವರು ಅಂದುಕೊಂಡಷ್ಟು ಸಲೀಸಾಗಿ ಆಗಿಲ್ಲ. ಬಿಜೆಪಿ ಬೆಂಬಲಿತ ಸದಸ್ಯರು ಹೊಸ ಅಧ್ಯಕ್ಷರ ಚುನಾವಣೆಯಲ್ಲಿ ತೋರಿದ ರಾಜಕೀಯದಾಟ ಕುತೂಹಲದ ಬೆಳವಣಿಗೆ ಸೃಷ್ಟಿ ಮಾಡಿದೆ.
ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್ ಬೆಂಬಲಿತ 8, ಬಿಜೆಪಿ ಬೆಂಬಲಿತ 4 ಸದಸ್ಯರಿದ್ದರು.
ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲದ ಸಿರಿಬೈಲು ಕೃಷ್ಣಮೂರ್ತಿ 7, ಬಿಜೆಪಿ ಬೆಂಬಲಿತ ಸದಸ್ಯರ ಬೆಂಬಲದ ಹೊನಾಸುಗದ್ದೆ ವಿಷ್ಣುಮೂರ್ತಿ 5 ಸದಸ್ಯರ ಮತ ಪಡೆದರು.
ಬಿಜೆಪಿ ಬೆಂಬಲಿತ ಸದಸ್ಯರ ಅಭ್ಯರ್ಥಿ ಹೊನಾಸುಗದ್ದೆ ವಿಷ್ಣುಮೂರ್ತಿ 1ಹೆಚ್ಚಿನ ಮತ ಪಡೆದಿರುವುದು ಈಗ ಗುಮಾನಿಗೆ ಕಾರಣವಾಗಿದೆ. ಕಾಂಗ್ರೆಸ್ ಬೆಂಬಲಿತ ಸದಸ್ಯರ ಪೈಕಿ ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.
ಕನ್ನಂಗಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಡ್ಡ ಮತದಾನದ ನಡುವೆ ನೂತನ ಅಧ್ಯಕ್ಷರಾಗಿ ಸಿರಿಬೈಲು ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ.