ಐವರ ವಿರುದ್ದ ಪ್ರಕರಣ ದಾಖಲು
ಗಾಂಜಾದಿಂದ ಕೊಲೆ ಸಂಚಿನವರೆಗೆ...!
ತೀರ್ಥಹಳ್ಳಿ: ಸಾಮಾಜಿಕ ಜಾಲತಾಣದಲ್ಲಿ ಚರ್ಚ್ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಗಾಂಜಾ ಹಾಗೂ ಕೊಲೆಗೆ ಸಂಚು ರೂಪಿಸಿದ್ದ ಇಬ್ಬರು ಅರೋಪಿಗಳನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ನಿಸಾರ್ (55), ಬೆಂಗಳೂರಿನ ಅಲೆಕ್ಸ್ (42) ಬಂಧಿತರು.
ಜುಲೈ 17ರ ರಾತ್ರಿ ಮಂಗಳೂರಿನಿಂದ ಶಿವಮೊಗ್ಗಕ್ಕೆ ಗಾಂಜಾ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ
ಮೇರೆಗೆ ಡಿವೈಎಸ್ಪಿ ಶಾಂತವೀರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದಾರೆ. ₹70 ಸಾವಿರ ಮೌಲ್ಯದ ಒಟ್ಟು 2 ಕೆ.ಜಿ 300 ಗ್ರಾಂ ತೂಕದ ಒಣ ಗಾಂಜಾವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಅಜೀಲ್ (37), ಸಜ್ಜು
ಫ್ರಾನ್ಸಿಸ್ (40) ದಸ್ತಗಿರಿ ಮಾಡಿ ವಿಚಾರಣೆ
ನಡೆಸಿದ್ದರು.
ವಿಚಾರಣೆ ವೇಳೆ ಅಜೀಲ್
ಅವರನ್ನು ಗಾಂಜಾ ಕೇಸ್ನಲ್ಲಿ ಸಿಕ್ಕಿಹಾಕಿಸುವುದು. ಸಜ್ಜು ಫ್ರಾನ್ಸಿನ್ಸ್ ಅವರನ್ನು ಕಾರು ಅಪಘಾತದಲ್ಲಿ
ಕೊಲೆ ಮಾಡಿಸುವ ಸುಪಾರಿ ಕೊಟ್ಟ ವಿಷಯ ಭಹಿರಂಗವಾಗಿದೆ. ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಫ್ರೋಜ್ ಅಹಮ್ಮದ್ (37) ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆತನಿಂದ
₹80 ಸಾವಿರ ನಗದು ಸೇರಿದಂತೆ
ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.