ರೋಗಿಯೊಂದಿಗೆ ನಾಲ್ವರ ಸಾವು
ಟೋಲ್ ಗೇಟ್ ಗೆ ಅಪ್ಪಳಿಸಿದ ವಾಹನ
ಕಾರವಾರ ಜಿಲ್ಲೆಯ ಹೊನ್ನಾವರದಿಂದ ರೋಗಿಯನ್ನು ಚಿಕಿತ್ಸೆಗೆ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಶಿರೂರು ಟೋಲ್ ಗೇಟ್ ನಲ್ಲಿ ಪಲ್ಟಿಯಾಗಿ ಟೋಲ್ ಗೇಟ್ ನಲ್ಲಿರುವ ಕಂಬಕ್ಕೆ ಅಪ್ಪಳಿಸಿದೆ, ಅಪಘಾತದ ತೀವ್ರತೆಗೆ ನಾಲ್ವರು ಮೃತಪಟ್ಟಿದ್ದಾರೆ.
ಈ ಭೀಕರ ಅಪಘಾತದಲ್ಲಿ ಟೋಲ್ ಸಿಬ್ಬಂದಿಗಳೂ ಗಂಭೀರ ಗಾಯಗೊಂಡಿದ್ದಾರೆ. ಗಜಾನನ ನಾಯ್ಕ ಎಂಬವರನ್ನು ಸಂಬಂಧಿಕರು ಉಡುಪಿ ಜಿಲ್ಲೆಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಈ ದುರಂತ ನಡೆದಿದೆ, ಆಂಬ್ಯುಲೆನ್ಸ್ ಹೊನ್ನಾವರದ ಶ್ರೀದೇವಿ ಆಸ್ಪತ್ರೆಗೆ ಸೇರಿದ್ದಾಗಿದೆ.
ಮೃತರನ್ನು ಹಾಡಗೇರಿಯ ಮಂಜುನಾಥ ನಾಯ್ಕ, ಲೋಕೇಶ್ ನಾಯ್ಕ, ಜ್ಯೋತಿ ನಾಯ್ಕ ಮತ್ತು ಬಳಕೂರಿನ ಗಜಾನನ ನಾಯ್ಕ ಎಂದು ಗುರುತಿಸಲಾಗಿದೆ.
ಆಂಬುಲೆನ್ಸ್ ವೇಗವಾಗಿ ಬಂದು ಪಲ್ಟಿಯಾಗುವ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ.